Saturday 20 April 2013


ನಮ್ಮೂರ ನಮಗ ಪಾಡ ,ಯಾತಕವ್ವ ಹುಬ್ಬಳ್ಳಿ ಧಾರ್ವಾಡ
ಡಾ.ಪ್ರಕಾಶ ಗ.ಖಾಡೆ
(ಎಪ್ರೀಲ್ 16 ಆನಂದ ಕಂದ ಕಾವ್ಯನಾಮದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಜನ್ಮ ದಿನ.ಅವರ ನೆನಪಿಗೆ ಈ ಲೇಖನ)
ಕನ್ನಡ ನವೋದಯ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರಾಗಿರುವ ಆನಂದಕಂದ ಅವರದು ಶುದ್ಧ ಜನಪದ ಶೈಲಿ. ಇದ್ದುದನ್ನು ಇದ್ದ ಹಾಗೆ, ಸಹಜತೆಗೆ ಕೆಡಕು ತಾಗದಂತೆ ಮೂಲರೂಪಕ್ಕೆ ಮತ್ತಷ್ಟು ಜೀವ ತುಂಬಿ ಚಿತ್ರಿತವಾಗಿರುವ ಅವರ ಜಾನಪದ ಪ್ರಭಾವಿತ ಕವಿತೆಗಳು ನಾಡವರ ನಾಲಿಗೆಯ ಮೇಲೆ ನಲಿದು ಜನಪ್ರಿಯವಾದವು. ಆನಂದಕಂದರ ಜನಪದ ರೀತಿಯ ಕವಿತೆಗಳು ಜಾನಪದವೇ ಎನ್ನುವಷ್ಟು ಜನಾನುರಾಗಿಯಾಗಿವೆ. ಈ ಜನಪ್ರಿಯತೆಗೆ ಮುಖ್ಯಕಾರಣ ಜಾನಪದದ ಧಾಟಿ ಆದರೂ ಆ ಕಾಲಕ್ಕೆ ಆನಂದ ಕಂದರ ಗೀತೆಗಳನ್ನು ಹಾಡಿ ಖ್ಯಾತಿ ಪಡೆದ ‘ಸಾವಿರ ಹಾಡಿನ ಸರದಾರ’ರೆನಿಸಿದ ಹುಕ್ಕೇರಿ ಬಾಳಪ್ಪನವರೂ ಒಂದು ಕಾರಣ. ಜನಪದ ಹಾಡುಗಾರ ಹುಕ್ಕೇರಿ ಬಾಳಪ್ಪನವರು ಆನಂದಕಂದರ ಹಲವಾರು ಕವನಗಳನ್ನು ಅವಿಸ್ಮರಣೀಯವೆಂಬಂತೆ ರಸಪೂರ್ಣವಾಗಿ ಹಾಡಿ ತೋರಿಸಿದ್ದಾರೆ.
‘ಆನಂದಕಂದ’ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರ ಜಾನಪದ ಆಸಕ್ತಿಗೆ ಮೂಲಕಾರಣ ಅವರು ಬೆಳೆದ ಪರಿಸರ ಮತ್ತು ತಾಯಿಯ ಪ್ರಭಾವ. 1900 ಏಪ್ರಿಲ್ 16 ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದ ಬೆಟಗೇರಿ ಕೃಷ್ಣಶರ್ಮರು. ಮನೆಯಲ್ಲಿಯ ಹಬ್ಬ-ಹರಿದಿನಗಳ ಆಚರಣೆ, ಪುರಾಣ ಪುಣ್ಯ ಕಥೆಗಳ ಶ್ರವಣ. ಜಾನಪದದ ನಿಕಟ ಸಂಪರ್ಕ ಅವರಿಗೆ ದಕ್ಕಿತು. ಆನಂದಕಂದರು ಕಳೆದ ಶತಮಾನದ ಇಪ್ಪತ್ತನೆಯ ದಶಕವು ಭಾರತವು ಸ್ವಾತಂತ್ರ್ಯಕ್ಕಾಗಿ ತವಕಿಸುತ್ತಿದ್ದ ಕಾಲದಲ್ಲಿ ರಾಷ್ಟ್ರೀಯತೆಗೆ ಆಕರ್ಷಿತರಾದರು. ರಾಷ್ಟ್ರೀಯತೆಯ ಜಾಗ್ರತೆಗೆ ಪೋಷಕವಾಗುವ ಅನೇಕ ಹಾಡುಗಳನ್ನು ಈ ಅವದಿsಯಲ್ಲಿ ರಚಿಸಿದರು. ರಾಷ್ಟ್ರೀಯ ಪದ್ಯಾವಲಿ(1921), ಗಾಂದಿsೀ ಗೀತ ಸಪ್ತಕ (1921) ರಾಷ್ಟ್ರೀಯ ಪದ್ಯಮಾಲೆ(1921)ಯ ಹಾಡುಗಳು ಭಾವ ತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಬಿsಮಾನದ ಪ್ರಜ್ವಲಿಸುವಂತೆ ಮಾಡಿದವು.
ಬೆಟಗೇರಿ ಕೃಷ್ಣಶರ್ಮ ಅವರು ಜಾನಪದ ಕಾರ್ಯವನ್ನು 1929 ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಜನಪದ ತ್ರಿಪದಿಗಳನ್ನು ಹಾಡುವುದರೊಂದಿಗೆ ಆರಂಭ ಮಾಡಿದರು. ಅವುಗಳ ಸೊಬಗು ಸೌಂದರ್ಯದ ಜೊತೆಗೆ ಜಾನಪದದ ಶಕ್ತಿ ಸಾಮಥ್ರ್ಯವನ್ನು ಎತ್ತಿ ತೋರಿದರು. ‘ಹಳ್ಳಿಯ ಹಾಡುಗಳು’ ಜಾನಪದವನ್ನು ಹೆಚ್ಚು ಪ್ರಸಿದ್ಧಿಗೆ ತರಲು ಸಹಾಯಕಾರಿಯಾಯಿತು. 1922ರಲ್ಲಿ ಬೆಟಗೇರಿಯವರು ಸಂಗ್ರಹಿಸಿದ ‘ಕೆರೆಗೆ ಹಾರ’ ಜನಪದ ಗೀತೆಯು ಅವರಿಗೆ ಹೆಸರು ಹಾಗೂ ಕೀರ್ತಿ ತಂದಿತು.
‘ಕೆರೆಗೆ ಹಾರ’ ವನ್ನು 1925 ರಿಂದ ತಮ್ಮ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ವಿವರಿಸಿ, ಧಾಟಿ ಹಾಗೂ ಭಾವಪೂರ್ಣವಾಗಿ ಹಾಡಿ ತೋರಿಸುತ್ತಿದ್ದರು. ಈ ಹಾಡು ಕೋಲು ಪದದಲ್ಲಿ ಹೆಣೆದುಕೊಂಡಿದೆ. “ಸವದತ್ತಿ ತಾಲ್ಲೂಕಿನ ಊರಾಗಿರುವ ಯರಗಟ್ಟಿಯ ಹೂಗಾರ ಮನೆತನದ ಹೆಣ್ಣು ಮಗಳನ್ನು ಶ್ರೀ ಕೃಷ್ಣಶರ್ಮರ ಹುಟ್ಟೂರಾದ ಬೆಟಗೇರಿಯಲ್ಲಿರುವ ಹೂಗಾರ ಮನೆತನದ ಕಲ್ಲಯ್ಯ ಎಂಬವನಿಗೆ ಮದುವೆ ಮಾಡಿಕೊಟ್ಟಿದ್ದರು. ಹಬ್ಬ ಹುಣ್ಣಿವೆಗಳ ರಾತ್ರಿಗಳಲ್ಲಿ ಹೆಣ್ಣು ಮಕ್ಕಳ ಹಾಡುಗಳು ನಡೆಯುತ್ತಿದ್ದವು. ಕೃಷ್ಣಶರ್ಮರು ಗುಂಪಿನಲ್ಲಿ ಕುಳಿತು ಕೇಳಿ ಕಂಠಪಾಠ ಮಾಡಿ ಬರೆದು ಬಳಿಕ ತಮ್ಮ ಮನೆಗೆ ಕರೆಯಿಸಿ ಮತ್ತೆ ಹಾಡಿಸಿ, ಸರಿಯಾಗಿ ನೋಡಿ, ಸಂಗ್ರಹಿಸಿದರು. ಈ ಹಾಡು ಬೆಟಗೇರಿ ಅವರಿಗೆ ಜಾನಪದ ಶೈಲಿಯನ್ನೇ ಕಲಿಸಿತು.” ಎನ್ನುತ್ತಾರೆ ಡಾ.ನಿಂಗಣ್ಣ ಸಣ್ಣಕ್ಕಿಯವರು.
ನಲ್ವಾಡುಗಳು :
ಆನಂದಕಂದರ ‘ನಲ್ವಾಡುಗಳು’ ಆಡುನುಡಿಯ ಸಹಜ ರೂಪಕತೆಯಿಂದ ಕಾವ್ಯವನ್ನು ಸರಳಗೊಳಿಸುತ್ತ ಜನಸಾಮಾನ್ಯರ ನಾಲುಗೆಯ ಮೇಲೂ ನಲಿಯುವಂತೆ ಮಾಡಿವೆ. ‘ನಲ್ವಾಡುಗಳು’ ಸಂಕಲನವು ಇಪ್ಪತ್ತೇರಡು ಪ್ರೀತಿ ಗೀತೆಗಳನ್ನುಜಾನಪದದಲ್ಲಿ ರೂಪಿಸಿದ ಸಂಕಲನ. ಇಲ್ಲಿ ಬೆಟಗೇರಿ ಅವರು ಅಪ್ಪಟ ಜನಪದ ಕವಿಯಂತೆ ಕಾಣುತ್ತಾರೆ. ಶುದ್ದ ಜಾನಪದಕ್ಕೆ ಇವರ ಕವಿತೆಗಳು ಪ್ರಧಾನವಾಗಿ ತೋರುತ್ತವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದದ ವಿವಿಧ ಲಯಗಳೆಲ್ಲವನ್ನೂ ಯಶಸ್ವಿಯಾಗಿ ‘ನಲ್ವಾಡುಗಳು’ ಸಂಕಲನ ಕವಿತೆಗಳಲ್ಲಿ ತಂದಿದ್ದಾರೆ.
ಗೋದಿ ಬೀಜಕ್ಕಂತ ಗೋಕಾಂವಿಗ್ಹೋಗಿದ್ದೆ
ಸಾದಗಪ್ಪಿನ ಸವಿಹೆಣ್ಣ
ಸಾದಗಪ್ಪಿನ ಸವಿಹೆಣ್ಣ ನೋಡುತಲೆ
ಗೋದಿ ಬಿತ್ತಿಗಿಯ ಮರತೆನೊ
ಜನಪದ ತ್ರಿಪದಿಗಳಲ್ಲಿ ಕಂಡು ಬರುವ ಶೈಲಿ, ರೂಪ, ವಸ್ತು ಬೆಟಗೇರಿ ಅವರ ಕವಿತೆಗಳಲ್ಲಿ ಸ್ಥಾನ ಪಡೆದಿವೆ. ‘ನಲ್ವಾಡುಗಳು’ ಸಂಕಲನದ’ ನಮ್ಮೂರ ಜಾತ್ರಿ ಬಲು ಜೋರಾ, ಬೆಣ್ಣಿಯಾಕಿ, ಬುತ್ತಿ ತೂಗೊಂಡು ಹೋಗ್ತಿನಿ ಹೊಲಕ, ಯಾರೋ ಏನೋ ಬರತಾರಂತ, ಹಿಂಗ್ಯಾಕ ನೋಡತಾನ, ಚಿನ್ನತ್ತಿಯ ಮಗ, ಬಡವರ ಮಗಳು, ಗೌಡರ ಮನೆ ಸೊಸಿ, ಗೆಣತಿ, ಏನ ಮಾಡ ಅಂತೀ, ಬೆಳವಲ ಒಕ್ಕಲತಿ ಮೊದಲಾದ ಕವಿತೆಗಳು ಹೆಸರೇ ಸೂಚಿಸುವಂತೆ ಜನಪದ ಸಂಸ್ಕøತಿಗೆ ಸೇರಿದ್ದು, ಅಲ್ಲಿನ ವಸ್ತು, ಲಯ, ಸೊಗಸು ಸೌಂದರ್ಯಗಳನ್ನು ಪಡೆದುಕೊಂಡಿದೆ ಎನ್ನುವುದಕ್ಕಿಂತ ಜಾನಪದವೇ ಆಗಿದೆ ಎಂದು ಗುರುತಿಸಲು ಸಾಧ್ಯ. ‘ನಮ್ಮ ಹಳ್ಳಿಯೂರs ನಮಗ ಪಾಡs ಯಾತಕವ್ವಾ ಹುಬ್ಬಳ್ಳಿ ಧಾರ್ವಾಡ’ ಎಂಬ ಆನಂದಕಂದ ಜನಪ್ರಿಯ ಈ ಗೀತೆ ಅವರ ಒಟ್ಟು ಕಾವ್ಯ ಧೋರಣೆಯನ್ನು ಪ್ರಕಟಿಸುತ್ತದೆ.
ಊರ ಮುಂದ ತಿಳಿನೀರಿನ ಹಳ್ಳ
ಬೇವು ಮಾವು ಹುಲಗಲ ಮರಚೆಳ್ಳ
ದಂಡಿಗುಂಟ ನೋಡು ನೆಳ್ಳs ನೆಳ್ಳs
ನೀರ ತರುವಾಗ ಗೆಣತ್ಯಾರ ಜೋಡs
ಯಾತಕವ್ವಾ ಹುಬ್ಬಳ್ಳಿ – ಧಾರ್ವಾಡs
ಆಧುನಿಕತೆಯ ಸೋಗಿನಲ್ಲಿ ವಾಸ್ತವದ ಬದುಕು ಅನುಭವಿಸುವ ವಂಚಿತ ಸಮುದಾಯದ ನೋವು ನಿರಾಸೆಗಳನ್ನು ಈ ಮೂಲಕ ಅಬಿsವ್ಯಕ್ತಪಡಿಸುವ ಕವಿ ಗ್ರಾಮ ಸಂಸ್ಕøತಿಯ ತಾಜಾತನ, ಅದರ ಸಹಜತೆಗೆ ಮಾರುಹೋಗಿ ಅದರಲ್ಲಿ ಬದುಕಿನ ಅಂತಿಮ ಸಾರ್ಥಕತೆಯನ್ನು ಪ್ರಕಟಿಸಿದ್ದಾರೆ. ಬೇಂದ್ರೆ, ಕುವೆಂಪು ಅವರಂತೆ ಭಾಷೆಯನ್ನು ಹೇಗೆ ಬೇಕೊ ಹಾಗೆ ಹಿಂಜುವುದಕ್ಕೆ, ಹಿಂಡುವುದಕ್ಕೆ ಬೆಟಗೇರಿಯವರು ಹೋಗಿಲ್ಲ. ಭಾವವನ್ನು ಸ್ಪಷ್ಟಪಡಿಸುವ ಶಕ್ತಿಯನ್ನು ಬೆಟಗೇರಿಯವರ ಭಾಷೆ ಜಾನಪದದಿಂದ ಪಡೆದಿದೆ. ಸಂಭಾಷಣೆಯ ರೀತಿಯೂ ಜನಪದರ ಮಾತಿನ ಯಥಾವತ್ತ ರೂಪವಾಗಿದೆ. ಚೆಲುವೆ ಹೆಣ್ಣನ್ನು ಒಲಿದು ತಂದ ಅಣ್ಣನಿಗೆ ತಂಗಿ ಕೇಳುವ ಮಾತು ಗಮನಿಸಿ,
“ಹೇಳು ಹ್ಯಾಂಗಿವಳು ನಿನ್ನ ಮೆಚ್ಚಿದಳು
ಮಾಟ ಮಾಡಿದೇನೋ”
‘ಎಲ್ಲಿಂದೀಕೀನ ಕರೆತಂದೆಣ್ಣಾ ಯಾರು ಹೇಳು ಈಕಿ’ ಎಂಬ ಮಾತಿನಲ್ಲಿ ಸಹಜತೆ ಇದೆ. ಜನಪದರ ಆಡುನುಡಿಯಲ್ಲಿ ಬಳಕೆಯಾಗುವ ಪಡೆನುಡಿ, ಗಾದೆ, ನಾಣ್ನುಡಿಗಳ ರೂಪಗಳು ಆನಂದಕಂದರ ಕಾವ್ಯದಲ್ಲಿಯೂ ಬೇಂದ್ರೆಯವರ ಕಾವ್ಯದಂತೆ ತುಂಬಿಕೊಂಡಿವೆ.
ಉಟ್ಟಾಳು ಹಸಿರು ಪತ್ತಲಾ
ಪತ್ತಲಲ್ಲ ಹೂವಿನ್ಹಿತ್ತಲಾ
( ನಾಜೂಕದ ನಾರಿ)
‘ಮುಂಗುರುಳು ಹಾರ್ಯಾಡುವ ಹಣಿ
ಚೆಲ್ವಿಕೆಯ ಖಣೀ’
(ಬೆಣ್ಣಿಯಾಕಿ)
ಹೀಗೆ ಅನೇಕ ರೂಪಗಳು ಮಾತಿನ ಮೋಡಿಯಿಂದ ಜಾನಪದರ ಶಕ್ತಿ ಸೌಂದರ್ಯ, ಮಾತಿನ ಶೈಲಿ ಸಿದ್ದಿ ಬೆಟಗೇರಿಯವರ ಕಾವ್ಯದಲ್ಲಿ ಸಮೃದ್ಧಗೊಂಡಿವೆ.
‘ನಾ ಸಂತಿಗೆ ಹೋಗಿನ್ನಿ – ಆಕಿ ತಂದಿದ್ದಾಳೋ ಬೆಣ್ಣಿ;
ಹಿಂಡು ಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ
(ಬೆಣ್ಣಿಯಾಕಿ)
‘ಹೆಜ್ಜೆ ಹೆಜ್ಜೆಗೂ ಘಿಲಿಘಿಲಿ, ಘಿಲಿಘಿಲಿ ಗೆಜ್ಜಿಯ ಕುಣಿಸುತ ಬರುವಾಕಿ’
(ಗೌಡರ ಮನಿಸೊಸಿ),
ಬುತ್ತೀ ತೊಗೊಂಡು ಹೋಗ್ತಿನಿ ಹೊಲಕ
ನಾ ಬರ್ತೀನಿ ಹೊತ್ತು ಮುಣುಗುದಕ
ಹೊಳಿ ದಂಡೀ ಮ್ಯಾಗ ನಮ್ಮ ಹೊಲಾ
ಬೆಳೆದು ನಿಂತೈತಿ ಬಿಳಿ ಜೋಳ ನಿಲಾ
(ಬೆಳವಲ ಒಕ್ಕಲತಿ)
ಹೀಗೆ ಜನಪದ ಜೀವನದ ವೈವಿಧ್ಯಮಯ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಆನಂದಕಂದರು ‘ನಲ್ವಾಡುಗಳು’ ಸಂಕಲನದ ಕವಿತೆಗಳಲ್ಲಿ ಕಂಡರಿಸಿದ್ದಾರೆ. ಇಲ್ಲಿ ಉತ್ತರ ಕರ್ನಾಟಕದ ಬೆಳಗಾವಿ-ಧಾರವಾಡ-ವಿಜಾಪುರ ಭಾಗದ ಕನ್ನಡ ಭಾಷಾ ಪ್ರಭೇಧವನ್ನು ತಮ್ಮ ಕವಿತೆಗಳಲ್ಲಿ ಬಳಸಿಕೊಂಡಿದ್ದಾರೆ. ಸತ್ವಪೂರ್ಣ ಜಾನಪದೀಯ ಭಾಷೆ ಇಲ್ಲಿದೆ. ಒಟ್ಟಿನಲ್ಲಿ ‘ಆನಂದಕಂದ’ರ ಕವಿತೆಗಳು ಕನ್ನಡ ನವೋದಯ ಕಾವ್ಯ ಸಂದರ್ಭದಲ್ಲಿ ಜಾನಪದವನ್ನು ಅದರ ಮೂಲತನದಿಂದಲೇ ಎತ್ತಿಕೊಂಡಷ್ಟು ಪ್ರಭಾವಕ್ಕೆ ಒಳಗಾಗಿವೆ. ಜನಪದ ಭಾಷೆ, ಛಂದಸ್ಸು, ನುಡಿಗಟ್ಟು ಮತ್ತು ಜನಪದರ ವಿವಿಧ ಲಯಗಳೆಲ್ಲವನ್ನು ಹಾಗೂ ಅವರ ಬದುಕಿನ ಕ್ರಮವನ್ನು ಅವರ ಕವಿತೆಗಳು ಯಶಸ್ವಿಯಾಗಿ ತನ್ನದಾಗಿಸಿಕೊಂಡಿವೆ. ಬೇಂದ್ರೆ, ಮಧುರಚೆನ್ನರಂತೆ ಜಾನಪದದ ಮಹತ್ವಪೂರ್ಣ ಸಾಧಕರಾಗಿ ಬೆಟಗೇರಿ ಕೃಷ್ಣಶರ್ಮರು ನವೋದಯ ಕಾವ್ಯದ ಸಂದರ್ಭದಲ್ಲಿ ಎದ್ದು ಕಾಣುತ್ತಾರೆ.

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

ಆನಂದ ಕಂದರ ಕಾವ್ಯಾವಲೋಕನ « ಅವಧಿ / avadhi

Monday 15 April 2013

ಕನ್ನಡ ಜನಪದಕ್ಕೆ ಮೊದಲ ನೇಗಿಲ ಹೂಡಿದ 'ಹಲಸಂಗಿ ಗೆಳೆಯರು.'



 ವಿಶೇಷ ಲೇಖನ

ಕನ್ನಡ ಜನಪದಕ್ಕೆ ಮೊದಲ ನೇಗಿಲು ಹೂಡಿದ ‘ಹಲಸಂಗಿ ಗೆಳೆಯರು

               
- ಡಾ.ಪ್ರಕಾಶ ಗ.ಖಾಡೆ

            ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿಯ ಗೆಳೆಯರು ಮೊದಲ ಬಾರಿಗೆ  ಜನಪದ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದ ರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು. ಕಳೆದ ಶತಮಾನದ ಮೂವತ್ತರ ದಶಕದ ಅರ್ಧಭಾಗವು ಜನಪದ ಸಾಹಿತ್ಯ ಸಂಗ್ರಹ ಕಾರ್ಯದ ಕ್ರಿಯಾಶೀಲ ವರ್ಷಗಳಾಗಿ ಕನ್ನಡ ಜನಪದ ಸಾಹಿತ್ಯ ಇತಿಹಾಸದಲ್ಲಿ ದಾಖಲಾದುದು. ಪ್ರತಿ ಎರಡು ವರ್ಷಕ್ಕೊಮ್ಮೆ ಒಂದರಂತೆ ಒಂದೊಂದು ವಿಶಿಷ್ಟ ಜನಪದ ಸಂಕಲನಗಳನ್ನು ಕೊಟ್ಟ ‘ಹಲಸಂಗಿ ಗೆಳೆಯರು’ ಮೊದಲ ಬಾರಿಗೆ ಕನ್ನಡ ದೇಸೀಕಾವ್ಯದ ಅಪೂರ್ವ ಪ್ರವೇಶವನ್ನು ಸಾರಿದರು. ಗರತಿಯ ಹಾಡು(1931), ಜೀವನ ಸಂಗೀತ(1933)ಗಳಂತೆ ‘ಮಲ್ಲಿಗೆ ದಂಡೆ’(1935) ಕೃತಿಯೂ ಜನಪದ ಗೀತ ಸಂಕಲನವಾಗಿ ಕನ್ನಡ ಜನಪದ ಸಾಹಿತ್ಯಕ್ಕೆ ತನ್ನ ಅಪರೂಪದ ಕೊಡುಗೆ ನೀಡಿತು. ಈ ಬಗೆಯ ಕಾರ್ಯದಲ್ಲಿ ಲಾವಣಿಕಾರರ, ಗರತಿಯರ ಹಾಡುಗಳಿಗೆ ಪ್ರಭಾವಿತರಾಗಿದ್ದ ಮಧುರಚೆನ್ನ, ಪಿ.ಧೂಲಾ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣನವರು ಮಾಡಿದ ಸಾಧನೆ ಅಪೂರ್ವವಾದುದು. ಹಲಸಂಗಿ, ಚಡಚಣ, ಇಂಡಿ ಮೊದಲಾದ ಪ್ರದೇಶಗಳಲ್ಲಿ  ಜನಪ್ರಿಯವಾಗಿದ್ದ ಈ ಹಾಡುಗಳ ಬಗ್ಗೆ 1923ರಲ್ಲಿ ವಿಜಾಪುರದಲ್ಲಿ ನಡೆದ 9 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಈ ಹಾಡುಗಳ ಖ್ಯಾತಿಯನ್ನು ಸಾರಿದರು
    ಡಾ.ಗುರುಲಿಂಗ ಕಾಪಸೆಯವರು ‘ಹಲಸಂಗಿ  ಹಾಡು’(2000) ಪ್ರಸ್ತಾವನೆಯಲ್ಲಿ ಹಲಸಂಗಿ ಭಾಗದ ಲಾವಣಿಕಾರರು ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡ ಬಗ್ಗೆ ಹೀಗೆ ಬರೆಯುತ್ತಾರೆ. “ಹಲಸಂಗಿಯ ಸುಪ್ರಸಿದ್ದ ಲಾವಣಿಕಾರನಾಗಿದ್ದ ಖಾಜಾಭಾಯಿ ತೀರಿಕೊಂಡ ಮೇಲೆ, ಅವನ ಲಾವಣಿಗಳು ಇನ್ನೂ ಸ್ವಾರಸ್ಯಕರವಾಗಿ ಹಾಡಲ್ಪಡುತ್ತಿದ್ದವು. ಖಾಜಾಭಾಯಿ ತೀರಿಕೊಂಡದ್ದು 1924ರಲ್ಲಿ. ಜೀವನ ಸಂಗೀತದಲ್ಲಿ ಸಂಗ್ರಹಿತವಾದ ಲಾವಣಿಗಳು ಮೂಲ ಕವಿಗಳಿಂದಲೇ ಪಡೆದವುಗಳಲ್ಲ. ಆಗಿನ ಕಾಲದ ಬೇರೆ ಬೇರೆ ಹಾಡುಗಾರರಿಂದ ದೊರಕಿಸಿದಂತಹವು. ಸಂಗ್ರಹಕಾರರು ತಿಳಿಸಿರುವಂತೆ ಲಾವಣಿಕಾರ ಕುಬ್ಬಣ್ಣನವರ ಮಕ್ಕಳಾದ ವೀರಭದ್ರಪ್ಪನವರು, ವಿಶೇಷವಾಗಿ ಹಲಸಂಗಿಯವರೇ ಆದ ಓಲೇಕಾರ ರಾಮಚಂದ್ರಪ್ಪನವರು ಲಾವಣಿಗಳನ್ನು ಹೇಳಿಕೊಟ್ಟಿದ್ದಾರೆ. ಓಲೇಕಾರ ರಾಮಚಂದ್ರಪ್ಪನವರು ಆ ಕಾಲದ ಸುಪ್ರಸಿದ್ದ ಹಾಡುಗಾರರು. ಈತನ ಕಂಚಿನ ಕಂಠ ಎಂಥವರನ್ನು ಆಕರ್ಷಿಸುತ್ತಿತ್ತು, ಬೆರಗುಗೊಳಿಸುತ್ತಲಿತ್ತು. 1936ರಲ್ಲಿ ರಾಮಕೃಷ್ಣ ಪರಮಹಂಸರ ಜನ್ಮ ಶತಮಾನೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಹಲಸಂಗಿಗೆ ಆಗಮಿಸಿದ್ದ ಶಿವರಾಮ ಕಾರಂತರು ಓಲೇಕಾರ ರಾಮಚಂದ್ರನಿಂದ ಲಾವಣಿಗಳನ್ನು ಕೇಳಿ ತಮ್ಮನ್ನು ತಾವೇ ಮರೆತರು. ಅಷ್ಟೇ ಅಲ್ಲ ಆತನನ್ನು ತಮ್ಮ ಪುತ್ತೂರಿಗೂ ಕರಿಸಿ, ಹಾಡಿಸಿ, ಕೇಳಿ ಸಂತೋಷಪಟ್ಟರು. ಈ ವಿಷಯವನ್ನು ಕಾರಂತರೇ ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ರಾಮಚಂದ್ರನ ಲಾವಣಿಗಳನ್ನು ಕೇಳಲು ಆ ದಿನ ಕಲೆತ ಹಿಂದೂ ಮುಸಲ್ಮಾನರ ಒಕ್ಕೂಟವು ನನ್ನ ಸ್ಮರಣೆಯಲ್ಲಿ ಬಹಳ ಕಾಲ ಇತ್ತು. ನಾನು ಮುಂದೊಮ್ಮೆ ಅವನನ್ನು ನಮ್ಮ ಊರಿಗೂ ಕರೆಯಿಸಿಕೊಂಡು ಹಾಡಿಸಿ ಕೇಳಿದ್ದೆ. ಒಮ್ಮೆ ಅವನಿಂದ ನಮ್ಮ ಶಾಲೆಯ ಹುಡುಗರಿಗೂ ಲಾವಣಿಗಳನ್ನು ಕಲಿಸುವ ಏರ್ಪಾಡು ಮಾಡಿದ್ದೆ. ಇದು ಅಂದಿನ ಹಲಸಂಗಿ ಲಾವಣಿ ಹಾಡುಗಾರನ ಅಗ್ಗಳಿಕೆಯನ್ನು ಸೂಚಿಸುತ್ತದೆ. ಓಲೇಕಾರ ರಾಮಚಂದ್ರನಂತೆ ಓಲೇಕಾರ ಮಾದಣ್ಣನೂ ಲಾವಣಿಗಳನ್ನು ಸೊಗಸಾಗಿ ಹಾಡುತ್ತಿದ್ದನು. ಮಧುರಚೆನ್ನರ ಆತ್ಮೀಯ ಗೆಳೆಯನಾದ ಈತನಿಂದ ಆ ಮುಂದಿನ ತಲೆಮಾರಿನವರು ಲಾವಣಿಗಳನ್ನು ಕೇಳಿ ಸಂತೋಷಪಟ್ಟಿದ್ದಾರೆ. ಹಲಸಂಗಿಯ ಗಾಢ ಸಂಬಂಧ ಹೊಂದಿದ್ದ ವರಕವಿ ದ.ರಾ.ಬೇಂದ್ರೆಯವರ ‘ಸಚ್ಚಿದಾನಂದ’ ದಂಥ ಕವಿತೆಗಳು ಲಾವಣಿಯ ಲಯವನ್ನು ಅಳವಡಿಸಿಕೊಂಡಿದ್ದನ್ನು ಗಮನಿಸಬಹುದು.”
   
ಮಧುರ ಚೆನ್ನ
ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ.  1919ರಲ್ಲಿ ಜರುಗಿದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹನುಮಂತಗೌಡರು ‘ಲಾವಣಿಗಳು’ ಎಂಬ ವಿಷಯವಾಗಿ ಒಂದು ಲೇಖನ ಓದಿ ‘ಹೈದರಾಬಾದಿನ ಲಾವಣಿ ಪದ’ ಎಂಬ ನಾಲ್ಕು ಪುಟಗಳ ಲಾವಣಿ ಕೊಟ್ಟಿದ್ದಾರೆ. ಅನಂತರ 1923ರಲ್ಲಿ ವಿಜಾಪುರದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಲೇಖನವನ್ನೋದಿದ ಮಧುರಚೆನ್ನರು ಆ ಲೇಖನದಲ್ಲಿ ಒಂದು ಲಾವಣಿಯನ್ನೇ ಉದಾಹರಿಸಿದ್ದಾರೆ. ಅದೇ ಸಮ್ಮೇಳನದಲ್ಲಿ ಪಿ.ಧೂಲಾ ಸಾಹೇಬರು ‘ಲಾವಣಿಯ  ಲಾವಣ್ಯ’ ಎಂಬ ಲೇಖನವನ್ನೋದಿದ್ದುದು ಒಂದು ಉಲ್ಲೇಖನೀಯ ಅಂಶವಾಗಿದೆ. 1925ರಲ್ಲಿ ಮಾಸ್ತಿಯವರು ‘ಕನ್ನಡ ಲಾವಣಿ ಸಾಹಿತ್ಯ’ ಎಂಬ ಲೇಖನವನ್ನು ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಬರೆದರು. ಹೀಗೆ ‘ಲಾವಣಿ’ಗಳ ವಿಷಯಕ್ಕೆ ಆಸಕ್ತಿ ಹುಟ್ಟಿಸುವ ಕಾರ್ಯವೇನೋ ನಡೆಯಿತು. ಆದರೆ ಯಾರೂ ಒಂದು ಸಂಗ್ರಹವನ್ನು ಕೊಡುವ ಸಾಹಸ ಮಾತ್ರ ಮಾಡಲಿಲ್ಲ. ಅದನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಹಲಸಂಗಿ ಗೆಳೆಯರು. ಈ ಮೂಲಕ ಕನ್ನಡ ನವೋದಯ ಕಾವ್ಯದ ಆರಂಭಕ್ಕೆ ಹಲಸಂಗಿ ಕೇಂದ್ರದಿಂದ ನಡೆದ ಈ ಕೆಲಸ ಕನ್ನಡದ ಹೊಸಕಾವ್ಯವನ್ನು ರೂಪಿಸುವಲ್ಲಿ ಎಲ್ಲ ಬಗೆಯ ಅವಕಾಶಗಳನ್ನು ಸಜ್ಜು ಮಾಡಿಕೊಟ್ಟಿತು.
 ಗರತಿಯ ಹಾಡು :
   ಕನ್ನಡ ಜನಪದ ಗೀತ ಸಂಕಲನ ಮೊಟ್ಟಮೊದಲ ಕೃತಿಯಾದ ‘ಗರತಿಯ ಹಾಡು’,ಇದರಂಥದು ಇನ್ನೊಂದಿಲ್ಲವೆನ್ನುವಷ್ಟು ಅದ್ವಿತೀಯವಾದುದು. ಇದು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಉಂಟುಮಾಡಿದ ತೀವ್ರತರವಾದ ಸೆಳೆತ ದಾಖಲಾರ್ಹವಾದುದು. ಹಲಸಂಗಿ, ಚಡಚಣ, ಸಾಲೋಟಗಿ, ಇಂಡಿ ಮೊದಲಾದ ಈ ಪರಿಸರದ ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ದಣಿವಿಲ್ಲದೆ ಹಾಡುವ ಹೆಣ್ಣು ಮಕ್ಕಳನ್ನು ಮುಂದೆ ಕುಳ್ಳಿರಿಸಿಕೊಂಡು ಹಲಸಂಗಿ ಗೆಳೆಯರು ಹಾಡಿಸಿ ಬರೆದುಕೊಂಡರು. ಹೀಗೆ ರೂಪಿತವಾದುದೇ ‘ಗರತಿಯ ಹಾಡು.’ ಇದರ ಸಂಗ್ರಾಹಕರು ಹಲಸಂಗಿಯ ಚೆನ್ನಮಲ್ಲಪ್ಪ, ಲಿಂಗಪ್ಪ, ರೇವಪ್ಪ ಮೊದಲಾದ ಗೆಳೆಯರು. ಅಂದರೆ ಮಧುರಚೆನ್ನ, ಸಿಂಪಿ ಲಿಂಗಣ್ಣ, ರೇವಪ್ಪ ಕಾಪಸೆ ಅವರು.
        ‘ಗರತಿಯ ಹಾಡು’ ಸಂಗ್ರಹದಲ್ಲಿರುವ ಸುಮಾರು 800 ತ್ರಿಪದಿಗಳು ಜನಪದ ತಾಯಂದಿರ ಕಲ್ಪಿತ ಶಕ್ತಿಗೆ, ಅನುಭವಕ್ಕೆ, ಬದುಕಿನ ವಿವಿಧ ಬಗೆಯ ಸಂದರ್ಭಗಳಿಗೆ ಹಿಡಿದ ಕನ್ನಡಿಗಳಾಗಿವೆ. ವಿಜಾಪುರ ಜಿಲ್ಲೆಯ ಭಾಷಿಕ ಸೊಗಡು ಇಲ್ಲಿ ಹೆಪುŒಗಟ್ಟಿದೆ. ಇಲ್ಲಿಯ ಹಾಡುಗಳನ್ನು ಅವುಗಳ ವಿಷಯ ವಸ್ತುಗಳ ಹಿನ್ನೆಲೆಯಲ್ಲಿ ವರ್ಗೀಕರಿಸಿಕೊಟ್ಟಿದ್ದಾರೆ. ಪರಂಪರೆ, ಸ್ತುತಿ, ತವರುಮನೆ ತಾಯ್ತಂದೆ, ಅಣ್ತಮ್ಮರೂ ಅಕ್ಕತಂಗಿಯರೂ ಅತ್ತಿಗೆ ನಾದಿನಿಯರೂ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸತಿಪತಿ ಇತ್ಯಾದಿ ಶೀರ್ಷಿಕೆಗಳಲ್ಲಿ ಸರಿಜೋಡಿಸಿ ಇಂಥ ಸಂಗ್ರಹಗಳ ವಿಧಾನವನ್ನು ತಾವೇ ರೂಪಿಸಿ ಮುಂದಿನ ಸಂಗ್ರಾಹಕರಿಗೆ ಮಾರ್ಗ ತೋರಿಸಿದ್ದಾರೆ.  ಬಿ.ಎಂ.ಶ್ರೀ., ಬೇಂದ್ರೆ ಮತ್ತು ಮಾಸ್ತಿ ಅವರು ಈ ಪ್ರತಿಷ್ಠಿತ ಜನಪದ ಗೀತ ಸಂಕಲನಕ್ಕೆ ಮೌಲಿಕವಾದ ಪ್ರಸ್ತಾವನೆ, ಪರಿಚಯ, ಮುನ್ನುಡಿ ಬರೆದು ತೂಕ ಹೆಚ್ಚಿಸಿದ್ದಾರೆ. ಅದುವರೆಗಿನ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಕುರಿತು, ವ್ಯಕ್ತವಾಗಿದ್ದ ಹೀಗಳಿಕೆಯ ಮಾತುಗಳನ್ನು ಮೊಟ್ಟಮೊದಲಬಾರಿಗೆ ‘ಇಕ್ಕಿ ಮೆಟ್ಟಿದ’ ಬಿ.ಎಂ.ಶ್ರೀ ಅವರು ‘ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು ಪರಿಷ್ಕøತವಾಗಿ ವೃದ್ದಿಯಾದುದು ಕವಿವಾಣಿ. ಜನವಾಣಿ ಬೇರು: ಕವಿವಾಣಿ ಹೂವು’ ಎಂದು ಸಾರಿದರು.ಹಾಡುತ್ತ, ಕಲಿಯುತ್ತ ಮುಂದಿನ ಪೀಳಿಗೆಗೆ ಬೆಳೆದು ಉಳಿದುಕೊಂಡು ಬಂದ ಈ ಪದಗಳು ಜನಸಾಮಾನ್ಯರ ನಾಲಗೆಯ ಮೇಲೆ ನಲಿದಾಡುವ ಭಾರತೀಯ ಸಂಸ್ಕøತಿಯ ಪರಂಪರೆಯ ಕಿಡಿನುಡಿಗಳಾಗಿವೆ.
ಬ್ಯಾಸಗಿ ದಿವಸಕ ಬೇವಿನ ಮರತಂಪ
ತವರ ಮನಿಯಾ ದೀಪ ತವರೇರಿ ನೋಡೇನ
ನಾರಿ ಕಣ್ಣಿನ ನೀರ ಬಾರಿ ಬೀಜಿನ್ಹಾಂಗ
ಗೆಳೆತನ ಕೂಡಿದರ ಗೆಜ್ಜಿ ಜೋಡಿಸಿದ್ಹಾಂಗ
ಅರಸ ಒಳ್ಳೆವರಂತ ವಿರಸವಾಡಲಿಬ್ಯಾಡ
ತೊಟ್ಟೀಲದಾಗೊಂದು ತೊಳದ ಮುತ್ತನು ಕಂಡೆ
ತಾಯಿದ್ರ ತವರ್ಹೆಚ್ಚು ತಂದಿದ್ರ ಬಳಗ್ಹೆಚ್ಚು
ಎಲ್ಲ್ಯಾರೆ ಇರಲೆವ್ವಾ ಹುಲ್ಲಾಗಿ ಬೆಳೆಯಲಿ
ಕಣ್ಣು ಮೂಗಿಲೆ ನನ್ನ ಹೆಣ್ಣು ಮಗಳು ಚೆಲುವಿ...
     ಹೀಗೆ ಪ್ರತಿ ತ್ರಿಪದಿಯಲ್ಲಿ ಕಂಡುಬರುವ ಸಾಲುಗಳು ಜನಪದರ ಸಾಹಿತ್ಯಿಕ ಭಾಷೆಯ ಶ್ರೇಷ್ಠತೆಯನ್ನು ಸಾರುತ್ತವೆ. ಸರಳ, ಲಲಿತ, ಹಿತಮಿತವಾದ ನುಡಿಗಳು ಎಂಥ ಸಹೃದಯದವರನ್ನಾದರೂ ಸೆಳೆದುಕೊಳ್ಳುತ್ತವೆ. ಇಂಥ ನುಡಿ ಸಾಲುಗಳು ಮೌಖಿಕ ಕಾವ್ಯ ಶ್ರೀಮಂತಿಕೆಯಿಂದ ಕೂಡಿ ಹಾಡಿದವರ ಜೊತೆಗೇನೆ ಮರೆಯಾಗಿ ಹೋಗುತ್ತಿರುವ ಸಂದರ್ಭದಲ್ಲಿ ಇವನ್ನು ಸಂಗ್ರಹಿಸಿ ಸಂಪಾದಿಸಿಕೊಡುವ ಮೂಲಕ ‘ಹಲಸಂಗಿ ಗೆಳೆಯರು’ ಕನ್ನಡ ನಾಡಿನ ಜಾನಪದದ ಹೆಬ್ಬಾಗಿಲು ತೆರೆದುದು ಒಂದು ಐತಿಹಾಸಿಕ ಸತ್ಯವಾಗಿದೆ. ಜನಪದ ತಾಯಂದಿರು ಕೊಡುವ ಪ್ರತಿಮೆ, ಪ್ರತೀಕಗಳಿಗೆ ಎಂಥ ಶಿಷ್ಟಕವಿಯನ್ನಾದರೂ ತೀವ್ರತರವಾಗಿ ಸೆಳೆಯುವಂಥದು.
ಮಗಳು ಎಂಥಾ ಚೆಲುವಿ ನಕ್ಕರೆ ತುಟಿಗೆಂಪು
ಅಳಿಯ ಎಂಥವರು ನನಗ್ಹೇಳ | ಹಂಪೀಯ
ವಿರುಪಾಕ್ಷಿಗಿಂತ ಚೆಲುವರು.
    ಜನಪದ ಕವಿಯತ್ರಿಯರ ಹೋಲಿಕೆ, ಹಂಬಲಗಳು ತಾವು ಆರಾದಿsಸುವ ದೇವನನ್ನು ಜೊತೆ ಸೇರಿಸಿ ಕಲ್ಪಿಸುವುದು ವಿಶಿಷ್ಟವಾದುದು. ದ.ರಾ.ಬೇಂದ್ರೆಯವರು ಈ ಸಂಕಲನದ ‘ಪರಿಚಯ’ದಲ್ಲಿ ಜನಪದ ಹಾಡುಗಾರ್ತಿಯರ ಪದ ಶ್ರೇಷ್ಠತೆಯನ್ನು ಹೀಗೆ ಸಾರಿದ್ದಾರೆ. “ಜೀವನವೇ ದೇವತೆಯಾದ, ತ್ರಿಪದಿ ಛಂದದಲ್ಲಿ ಹೊರಹೊಮ್ಮಿದ ‘ಗರತಿಯ ಹಾಡಿ’ನ ಋಷಿಗಳು ಹೆಣ್ಣು ಮಕ್ಕಳು-ನಮ್ಮ ತಾಯಿ ತಂಗಿಯರು, ಅಮ್ಮ ಅಕ್ಕಂದಿರು, ಮಡದಿ ಮಕ್ಕಳು. ಹಾಗೆ ವಿಚಾರಿಸಿ ನೋಡಿದರೆ ಅವರದೇ ನಿಜವಾದ ಕಾವ್ಯ, ಉಳಿದದು ಕಾವ್ಯದ ಛಾಯೆ”  ಎಂಬಲ್ಲಿ ಬೇಂದ್ರೆಯವರು ಈ ಕೃತಿಯ ಮಹತ್ತು ಸಾರಿದ್ದು ಸ್ಪಷ್ಟ ವಾಗುತ್ತದೆ.
     ಕನ್ನಡ ಕವಿಗಳನ್ನು ಪ್ರಭಾವಿಸಿಕೊಂಡು ಬಂದ ‘ಗರತಿಯ ಹಾಡು’ ಉದ್ದಕ್ಕೂ ತನ್ನ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದೆ. ‘ಈ ಗ್ರಂಥ ಕನ್ನಡದ ಗರತಿಯರ ಬಾಳಿನ ಅಮೃತ ಬಿಂದುಗಳನ್ನೇ ಸಂಕಲನ ಮಾಡಿದಂತಿರುವ ರೀತಿಯಲ್ಲಿ ದಿವ್ಯ ಮಾಧುರ್ಯವನ್ನು ನೀಡುತ್ತದೆ’ ಎಂದು ಜಾನಪದ ವಿದ್ವಾಂಸ ಎಲ್.ಆರ್.ಹೆಗಡೆ ಅವರು ಗುರುತಿಸಿದರೆ, ಗರತಿಯ ಹಾಡು ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನವಾಗಿದ್ದು ಗುಣದ ದೃಷ್ಟಿಯಿಂದ ಕೂಡ ಇಂದಿಗೂ  ಅದ್ವಿತೀಯ ಕೃತಿಯಾಗಿ ನಿಂತಿದೆ ಎಂದಿದ್ದಾರೆ ಹಿರಿಯ ವಿದ್ವಾಂಸರಾದ ಸಿ.ಪಿ.ಕೆ.ಅವರು. ಗುರುಲಿಂಗ ಕಾಪಸೆ ಅವರು ‘ಕನ್ನಡ ಜನಪದ ಸಾಹಿತ್ಯದ ಆದ್ಯ ಸಂಗ್ರಹವಾದ ಇದು ಅದ್ವೀತಿಯವಾದ ಸಂಗ್ರಹವೂ ಅಹುದು’ ಎಂದು ಅದರ ವಿಶೇಷತೆಯನ್ನು ಬಣ್ಣಿಸಿದ್ದಾರೆ. ಕೃತಿಗೆ ಆಶೀರ್ವಾದ ರೂಪದಲ್ಲಿ ಬರೆದ ಬರಹದಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಮಾತನ್ನು ಗಮನಿಸಬೇಕು. ಈ ಕೃತಿ ಮುಂದೆ ಕಾವ್ಯ ಕಟ್ಟುವ ಕವಿಗಳಿಗೆ ಮಾರ್ಗದರ್ಶಿಯಾಗಿರಲೆಂದು ಅವರು ಹೇಳಿದ್ದು ಈ ಪದಗಳು ನಮ್ಮ ಜನರೆಲ್ಲರ ಆದರವನ್ನು ಪಡೆಯಲೆಂದೂ ಇವುಗಳಿಂದ ಸಾಧ್ಯವಾದ ಎಲ್ಲ ಪ್ರಯೋಜನ ವನ್ನೂ ನಮ್ಮ ಸಾಹಿತ್ಯ ಸೇವಕರೂ ಹೊಂದಲೆಂದೂ ನಾನು ಹಾರೈಸುತ್ತೇನೆ ಎನ್ನುವಲ್ಲಿ ನವೋದಯದ ಪ್ರಾರಂಭದ ಕಾಲಕ್ಕೆ ಬರೆಯುತ್ತಿದ್ದ ಕವಿಗಳಿಗೆ ಈ ಕೃತಿ ಸ್ಪೂರ್ತಿ ನೀಡುವ ಸುಳಿವನ್ನು ಪ್ರಕಟಪಡಿಸಿದ್ದಾರೆ. ಈ ಹಾರೈಕೆ ನಿಜವೂ  ಆಗಿದೆ.
                                                                        ಜಿ.ಬಿ.ಖಾಡೆ
       ‘ಗರತಿಯ ಹಾಡು’ ಗ್ರಾಮೀಣರ ಆಸರಿಕೆ ಬ್ಯಾಸರಿಕೆ, ಪ್ರೀತಿ ಪ್ರೇಮ, ಸರಸ ವಿರಸ, ಮಮತೆ ಬಾಂಧವ್ಯ ಹೀಗೆ ನಿತ್ಯ ಬದುಕಿನ ಸಮಗ್ರ ಭಾವಗಳ ಅಬಿsವ್ಯಕ್ತಿಯಾಗಿ ಕನ್ನಡ ಕಾವ್ಯವನ್ನು ಜನಮುಖಿಯಾಗಿ ಸಾರ್ವತ್ರಿಕಗೊಳಿಸಿತು. ಉತ್ತರ ಕರ್ನಾಟಕದ ವಿಶೇಷವಾಗಿ ತದ್ದೇವಾಡ ಪ್ರಾಂತದ ಆಡುಮಾತಿನ ಬಂಧ. ಬಳುಕುಗಳನ್ನು ಹೊತ್ತು ಹುಟ್ಟಿರುವ ಈ ತ್ರಿಪದಿಗಳಿಗೆ ಸರಿಮಿಗಿಲೆನ್ನಿಸುವ ಜನಪದ ಗೀತ ಸಂಗ್ರಹಗಳು ಕನ್ನಡದಲ್ಲಿ ಬಹಳ ಇಲ್ಲ ಎಂಬುದು ‘ಗರತಿಯ ಹಾಡು’ ಕೃತಿಯ ಹೆಗ್ಗಳಿಕೆ ಸಾರುತ್ತದೆ. ಮುಂದೆ ಇದೇ ಭಾಗದಲ್ಲಿ ಹಲಸಂಗಿ ಗೆಳೆಯರ ತರುವಾಯ ತ್ರಿಪದಿ ಸಂಕಲನಗಳು ಮೂಡಿ ಬಂದವು. ಅವುಗಳಲ್ಲಿ ಈಶ್ವರಚಂದ್ರ ಚಿಂತಾಮಣಿ ಅವರ ‘ಗರತಿಯರ ಮನೆಯಿಂದ’ ಹಾಗೂ ಜಿ.ಬಿ.ಖಾಡೆ ಅವರ ‘ಕಾಡು ಹೂಗಳು’ ಸಂಕಲನಗಳು ಹೆಚ್ಚು ಜನಪ್ರಿಯವಾದವು. ಹಲಸಂಗಿ ಗೆಳೆಯರ ಮತ್ತು ಚಿಂತಾಮಣಿ ಅವರ ತರುವಾಯ ಅಖಂಡ ವಿಜಾಪುರ ಜಿಲ್ಲೆಯ ಜನಪದ ಗೀತ ಸಾಹಿತ್ಯ ಸಂಗ್ರಹ, ಸಂಪಾದನಾ ಕಾರ್ಯದಲ್ಲಿ ತೊದಲಬಾಗಿ(ಜಮಖಂಡಿ)ಯ ಜಿ.ಬಿ.ಖಾಡೆ ಅವರು 1965ರಲ್ಲಿ  ಬಹುದೊಡ್ಡ ಕೆಲಸ ಮಾಡಿದರು. ಅವರು ಹಳ್ಳಿ ಹಳ್ಳಿ ಸುತ್ತಿ ಸಂಗ್ರಹಿಸಿದ ಬೀಸುವ ಕಲ್ಲಿನ, ಕೋಲಾಟದ ಹಾಗೂ ಹಂತಿ ಪದಗಳನ್ನು ಒಳಗೊಂಡ ತ್ರಿಪದಿ ಸಂಕಲನವು ‘ಕಾಡು ಹೂಗಳು’ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯವು 1973ರಲ್ಲಿ ಪ್ರಕಟಿಸಿತು. ಮುಂದೆ ರಿವಾಯತ ಪದಗಳ ಸಂಕಲನ ‘ಹಳ್ಳಿ ಹಬ್ಬಿಸಿದ ಹೂಬಳ್ಳಿ’ ಹಾಗೂ ಡೊಳ್ಳಿನ ಮೇಳದವರು ಹೇಳಿದ 23 ಜನಪದ ಕಥೆಗಳ ‘ಬೆಳವಲ ಬೆಳಕು’ ಕೃತಿಗಳು 1981ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿತು. ಹಲಸಂಗಿ ಗೆಳೆಯರ ಪರಂಪರೆಯು ಈ ಭಾಗದಲ್ಲಿ ಜಿ.ಬಿ.ಖಾಡೆ ಅವರಿಂದ ಮುಂದುವರೆಯಿತು.
ಜೀವನ ಸಂಗೀತ :
        ಹಲಸಂಗಿ ಗೆಳೆಯರು ಮೊದಲ ಬಾರಿಗೆ ಲಾವಣಿ ಸಾಹಿತ್ಯವನ್ನು ಪ್ರಕಟಿಸಿ ಪ್ರಸಾರ, ಪ್ರಚಾರ ಮಾಡುವುದರೊಂದಿಗೆ ಕನ್ನಡ ಅಕ್ಷರಲೋಕದೊಳಗೆ ದೇಸೀಕಾವ್ಯಕ್ಕೆ ಉತ್ಕøಷ್ಟ ಸ್ಥಾನ ನೀಡಿದರು..      ಹಲಸಂಗಿ ಗೆಳೆಯರು ಕೈಗೊಂಡ ಆ ಸಂದರ್ಭದ ಜಾನಪದ ಸಂಗ್ರಹ, ಸಂಪಾದನೆ ಪ್ರಚಾರ ಕಾರ್ಯ ಜನಮುಖಿ ಸಾಹಿತ್ಯಕ್ಕೆ ಒಂದು ಬಗೆಯಲ್ಲಿ ವ್ಯಾಪಕತೆ ತಂದಿತು. ಮೊದಲ ಬಾರಿಗೆ ಜಾನ್ ಫೇತ್‍ವುಲ್ ಪಿs್ಲೀಟರ್ ಸಂಗ್ರಹಿಸಿದ್ದ ಆಯ್ದ ಲಾವಣಿಗಳು ‘ಇಂಡಿಯನ್ ಎಂಟಿಕ್ವೆರಿ’ 1885-1888ರಲ್ಲಿ ಪ್ರಕಟವಾಗಿದ್ದವು. ಆದರೆ ಇವುಗಳಿಗೆ ಕನ್ನಡದಲ್ಲಿ ವ್ಯಾಪಕತೆ  ತಂದುಕೊಟ್ಟ ಸಾಧನೆ ಹಲಸಂಗಿ ಗೆಳೆಯರಿಗೆ ಸಲ್ಲುತ್ತದೆ. ಪಿ.ಧೂಲಾ ಸಾಹೇಬ ಮತ್ತು ಸಿಂಪಿ ಲಿಂಗಣ್ಣನವರ ‘ಜೀವನ ಸಂಗೀತ’ ಲಾವಣಿಗಳ ಮೊದಲ ಸಂಗ್ರಹವಾಗಿದೆ. ‘ಜೀವನ ಸಂಗೀತ’ ಕೃತಿಯು ಹಲವು ನೆಲೆಗಳಲ್ಲಿ ಕನ್ನಡ ಕಾವ್ಯವನ್ನು ಚೇತನಗೊಳಿಸಿತು. ಮುಖ್ಯವಾಗಿ ಲಾವಣಿ ಕವಿಯ ಖಾಜಾಭಾಯಿಯನ್ನು ಮತ್ತು ಆತನ ಶೃಂಗಾರ ಕಾವ್ಯದ ರಸಪೂರ್ಣತೆಯನ್ನು ಕನ್ನಡ ಓದುಗರಿಗೆ ಕೊಟ್ಟಿತು. ಆಧುನಿಕ ಕನ್ನಡ ಕಾವ್ಯದಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ ದಾಂಪತ್ಯ ಗೀತೆಗಳ ‘ಮೈಸೂರು ಮಲ್ಲಿಗೆ’ ಕನ್ನಡ ಸಹೃದಯರನ್ನು ಪ್ರಭಾವಿಸಿಕೊಂಡಂತೆ, ಕನ್ನಡ ನವೋದಯದ ಆರಂಭಕಾಲದಲ್ಲಿ ಖಾಜಾಭಾಯಿಯ ಶೃಂಗಾರ ಲಾವಣಿಗಳಿಂದ ‘ಜೀವನ ಸಂಗೀತ’ ಹೆಸರಾಯಿತು. ಸಂಗ್ರಹದ ಪರಿಚಯದಲ್ಲಿ ‘ಏಳು ಮಂದಿ ಲಾವಣಿಕಾರರ ಮಿಗಿಲಾದ ಹನ್ನೆರಡು ಲಾವಣಿಗಳನ್ನು ನಾಡಿಗರ ಇದಿರಿಗೆ ಇಟ್ಟಿದ್ದೇವೆ. ಅಲ್ಲದೆ ಎರಡು ಚಿಕ್ಕ ಲಾವಣಿಗಳುಂಟು. ಅವುಗಳನ್ನು ಇಡೀ ಸಂಗ್ರಹದ ಮೊದಲೊಂದು ಕೊನೆಗೊಂದು ಸೇರಿಸಿ ದ್ದೇವೆ.’ ಎಂದಿದ್ದಾರೆ ಸಂಗ್ರಹಕಾರರು. ಇಲ್ಲಿ ಹಲಸಂಗಿಯ ಲಾವಣಿಕಾರ ಖಾಜಾಭಾಯಿಯ ಲಾವಣಿಗಳೇ ಹೆಚ್ಚಾಗಿದ್ದು, ಅವೆಲ್ಲ ಅತ್ಯಂತ ಮನೋಜ್ಞವಾಗಿವೆ. ಅಲ್ಲದೆ ಕುಬ್ಬಣ್ಣ, ಸಂಗಣ್ಣ, ನಾನಾ ಸಾಹೇಬ, ನ್ಯಾಮಣ್ಣ, ಶಿವಲಿಂಗ, ಗೋಪಾಳ ದುರದುಂಡಿ, ಸಿದ್ದೂ-ಶಿವಲಿಂಗ ಇವರ ರಚನೆಗಳಿವೆ. ಆ ಕಾಲದ ಕಾವ್ಯದ ನೀರಸ ಬಗೆಯನ್ನು ಸಂಗ್ರಹಕಾರರು ಕೃತಿಯ ಪರಿಚಯದಲ್ಲಿ ಹೇಳುತ್ತ ಕನ್ನಡ ಕಾವ್ಯಕ್ಕೆ ಜೀವಂತಿಕೆಯನ್ನು ತುಂಬುವ ಈ ಲಾವಣಿಗಳನ್ನು ನಾವು ಸಂಗ್ರಹಿಸಬೇಕಾಯಿತು ಎನ್ನುತ್ತಾರೆ.
       ‘ಶೃಂಗಾರ’ ಪ್ರಧಾನವಾದ ‘ಜೀವನ ಸಂಗೀತ’ ಲಾವಣಿ ಕೃತಿ ಕನ್ನಡ ಕಾವ್ಯಕ್ಷೇತ್ರಕ್ಕೆ ದೇಸೀಯತೆಯ ಹೊಸಸ್ಪರ್ಶ ನೀಡಿತು. ಇಲ್ಲಿಯ ಅಸಲಜಾತ ಹೆಣ್ಣು, ಸಂಪಿಗಿ ತೆನಿಯಂಥ ಹುಡುಗ, ವತ್ಸಲಾಪಹರಣ, ಚಂದ್ರಣಿ, ಕೃಷ್ಣಲೀಲೆ, ಗಿಡ್ಡಪೆÇೀರಿ ಈ ಕವಿತೆಗಳೆಲ್ಲ ಶೃಂಗಾರವನ್ನು ಒಂದು ರಸಗಟ್ಟಿಯಾಗಿ ಮಾಡಿಕೊಂಡಿವೆ. ಹಾಗೆಯೇ ‘ಜೀವನ ಸಂಗೀತ’ದಲ್ಲಿ ಶೃಂಗಾರದೊಂದಿಗೆ ಹಾಸ್ಯರಸವು ಜೊತೆಯಾಗಿಯೇ ಬಂದಿದೆ.    
        ಒಟ್ಟಾರೆ ‘ಜೀವನ ಸಂಗೀತ’ವು ಕನ್ನಡ ಲಾವಣಿ ಸಾಹಿತ್ಯದ ಒಂದು ಬಹುಮುಖ್ಯವಾದ ಕೃತಿಯಾಗಿ ಹೊರಹೊಮ್ಮುವುದರೊಂದಿಗೆ ಆ ಕಾಲಕ್ಕೆ ಅಡಿಯಿಟ್ಟ ಕನ್ನಡ ನವೋದಯಕ್ಕೆ ಮೊದಲ ಪಂಕ್ತಿಯ ಸಾಧಕ ಕೃತಿ ಎನಿಸಿತು. ಇಲ್ಲಿಯ ಎಲ್ಲ ಲಾವಣಿಗಳಲ್ಲಿನ ಕಲ್ಪನಾಶಕ್ತಿ, ಭಾವ ಸಂಪತ್ತು, ಲಯ ಪ್ರಾಸಗಳ ಗತ್ತು ಗಮ್ಮತ್ತು ನಮ್ಮ ಕವಿಗಳನ್ನು ಆಕರ್ಷಿಸಿತು. ಆ ಕಾಲಕ್ಕೆ ರೂಪಿತವಾದ ‘ಭಾವಗೀತ’ ಪ್ರಕಾರಕ್ಕೆ ಸರಿದೊರೆಯಾಗಿ ನಿಂತು ಲಾವಣಿಗಳು ತಮ್ಮ ಅಸ್ತಿತ್ವ ಪ್ರಕಟಿಸಿದವು.
 ಮಲ್ಲಿಗೆ ದಂಡೆ :
      ಹೆಣ್ಣು ಮಕ್ಕಳ ಹಾಡು ಸಂಗ್ರಹವಾದ ‘ಮಲ್ಲಿಗೆ ದಂಡೆ’ ಕೃತಿಯನ್ನು ಕಾಪಸೆ ರೇವಪ್ಪನವರು ಸಂಪಾದಿಸಿಕೊಟ್ಟರು.ಗ್ರಾಮೀಣರ ಜನಜೀವನದ ಮೇಲೆ ಹಾಡು ಹಾಸು ಹೊಕ್ಕಾಗಿರುವುದನ್ನು ‘ಮಲ್ಲಿಗೆ ದಂಡೆ’ಯ ಹಾಡುಗಳು ನಿರೂಪಿಸಿವೆ. ಇಲ್ಲಿ ಜನಪದರ ಆಚರಣೆಗಳ ವಿಶಿಷ್ಟ ಹೆಣಿಕೆ ಇದೆ. ಸ್ತುತಿಪದ, ಪ್ರಣಯ, ಭಾವಗೀತೆ, ಕಥೆಯ ಹಾಡು, ಮದುವೆಯ ಹಾಡು, ಸೋಬಾನದ ಹಾಡು, ಹಾಸ್ಯದ ಹಾಡು ಮುಂತಾದ ಸಾಂದಬಿರ್sಕ ಹಾಡುಗಳು ಇಲ್ಲಿ ಸಂಗ್ರಹಿಸಲಾಗಿದೆ. ಜನಪದರು ನಿತ್ಯ ಹೊಸತಾಗುವ, ಹೊಸತನಕ್ಕಾಗಿ ತೆರೆದುಕೊಳ್ಳುವ  ವಿಶಿಷ್ಟತೆಗೆ ಸಾಕ್ಷಿಯಾಗಿ ಅವರ ಹಾಡುಗಳು ಮತ್ತು ಹಾಡೊಳಗಿನ ವಸ್ತು ಸಂಗತಿಗಳು ಪ್ರಧಾನವಾಗುತ್ತವೆ. ‘ರೇವಪ್ಪನವರ ಸಾಹಿತ್ಯಿಕ ಕಾರ್ಯಗಳಲ್ಲಿ ಚಿರಸ್ಮರಣೀಯವಾದದ್ದು ಮಲ್ಲಿಗೆ ದಂಡೆ, ರೇವಪ್ಪನವರ ಈ ಪರಿಶ್ರಮವು ಕನ್ನಡ ಸಾರಸ್ವತ ಪ್ರಪಂಚ ಎಂದೂ ಮರೆಯದಂತಹದು.’ ಮಧುರಚೆನ್ನರು ಈ ಕೃತಿಯ ಮುನ್ನುಡಿಯಲ್ಲಿ ಕೃತಿಯ ಮೌಲ್ಯವನ್ನು ಪ್ರಕಟಪಡಿಸಿದ್ದಾರೆ. ಅಲ್ಲದೆ ಆಧುನಿಕ ಕನ್ನಡ  ಕಾವ್ಯ ಕಟ್ಟುವ ಮಾಲೆಗಾರರಿಗೆ ಇಲ್ಲಿ ಹೂವ ತಂದು ಇಟ್ಟ ಬಗ್ಗೆ ಅವರು ಹೀಗೆ ಬರೆಯುತ್ತಾರೆ. ‘ವರಕವಿಗಳು ಉದಯಿಸುವ ಮುಂಚೆ ನಮ್ಮಂಥ ನರಕವಿಗಳ ಜಂಗುಳಿಯೇಳುವುದು ಅನಿವಾರ್ಯ. ಇವರ ಕಾವ್ಯಶಕ್ತಿಯು ಸಾಗುವಳಿಯಿಂದ ಬೆಳೆಯಬೇಕಾದದ್ದು. ಇವರ ಸಸಿಗೆ ಹೊರಗಿನ ನೀರೂ ಹವೆಯೂ ಕಾಲಕಾಲಕ್ಕೆ ಒದಗಬೇಕು. ಈ ದೃಷ್ಟಿಯಿಂದ ಸಂಗ್ರಹಿಸಿದ ಪ್ರಸ್ತುತ ಗೀತ ಗುಚ್ಫವು ನವ್ಯ ಕಾವ್ಯಕುಮಾರಿಯ ಕಳೆಯನ್ನು ಹೆಚ್ಚಿಸುವುದಕ್ಕೆಂದು ಅವಳಿಗೆ ಕಟ್ಟಿದ ‘ಮಲ್ಲಿಗೆ ದಂಡೆ’ಯಾಗಿದೆ ಎಂದಿದ್ದಾರೆ.
     ‘ಮಲ್ಲಿಗೆ ದಂಡೆ’ ಕೃತಿಗೆ ವಿಶಿಷ್ಟತೆ ಪ್ರಾಪ್ತವಾಗಿರುವುದು ಇಲ್ಲಿನ ಜನಪದರ ಮನೆ ಮನೆಗಳಲ್ಲಿ ಆಚರಣೆಗಳನ್ನು ಕಟ್ಟಿಕೊಡುವಲ್ಲಿ. ಭಟಗಿ ಹಾಡು, ಒಳಕಲ್ಲ ಪೂಜೆ ಹಾಡು, ಅರಿಷಿಣ ಹಚ್ಚೋ ಹಾಡು, ಐರಾಣಿಯ ಹಾಡು,  ಸಂಡಿಗಿ ಕಡಿಯುವ ಹಾಡು, ನೂಲು ಸುತ್ತುವ ಹಾಡು, ಅಡಿಕೆ ಆಡುವ ಹಾಡು, ಭೂಮದ ಹಾಡು, ಬೀಗರ ಹಾಡು, ಕೂಸು ಒಪ್ಪಿಸುವ ಹಾಡು ಮೊದಲಾದವು ಮದುವೆ ಸಂದರ್ಭವನ್ನು ಕಟ್ಟಿಕೊಟ್ಟರೆ, ಮನಸ ಜೈನರ ಮಡದಿ, ಹಿಂಬಳಿ ಮುಂಬಳಿ, ರನ್ನದುಡುಗಣಿ, ಬಾಲಿ ತಾ ಮೈನೆರದು, ಹಣಿಯಂಬೊ ಭಾಂವಕ, ಹಸು ಮಗಳS ನೀಲಮ್ಮ ಹಾಡುಗಳು ಸೋಬಾನೆ ಪದಗಳಾಗಿವೆ. ಅಲ್ಲದೆ ಕುಬಸಾ ಮಾಡೊ ಹಾಡು, ಬಯಕೆಯ ಹಾಡು, ಉಡಿ ತುಂಬುವ ಹಾಡು, ಬೇನೆ ತಿನ್ನುವ ಹಾಡು, ತೊಟ್ಟಿಲಲ್ಲಿ ಹಾಕುವ ಹಾಡು ಮುಂತಾದ ವಿಶಿಷ್ಟ ಸಂದರ್ಭದ ಹಾಡುಗಳು ಇಲ್ಲಿವೆ. ಮದುವೆ ಮೊದಲಾದ ಸಂದರ್ಭಗಳಲ್ಲಿ ಜರುಗುವ ಹಾಸ್ಯದ ಪ್ರಸಂಗದ ಹಾಡುಗಳೂ ಇಲ್ಲಿವೆ. ಈ ಎಲ್ಲಾ ಹಾಡುಗಳ ಕೊನೆಯಲ್ಲಿ ಪ್ರತಿ ಹಾಡಿನ ಅರ್ಥ, ಸಂದರ್ಭ ಮತ್ತು ಪ್ರಾದೇಶೀಕ ಪದಗಳ ಅರ್ಥ ಹಾಗೂ ಛಂದಸ್ಸು ವಿವರಿಸಲಾಗಿದೆ. ಹೀಗಾಗಿ ‘ಮಲ್ಲಿಗೆ ದಂಡೆ’ ಸಂಕಲನವು ಜನಪದ ಗೀತ ಸಂಗ್ರಾಹಕರಿಗೆ ಒಂದು ಮಾದರಿ ಎನಿಸಿದೆ.
ಮದುವೆ, ಸೋಬಾನೆಗಳಲ್ಲಿ ಹೆಣ್ಣು ಮಕ್ಕಳ ಹೆರಳ ತುಂಬ ‘ಮಲ್ಲಿಗೆ ದಂಡೆ’ಯದೇ ಘಮಘಮಿಪ ಶೃಂಗಾರ. ಈ ಶೀರ್ಷಿಕೆಯ ಸಾರ್ಥಕತೆ ಎಂಬಂತೆ ಇಲ್ಲಿನ ಒಂದೊಂದು ಹಾಡೂ ‘ಮಲ್ಲಿಗೆ ದಂಡೆ’ಯ ಸುವಾಸನೆಯನ್ನೂ, ಮೋಹಕತೆಯನ್ನು ಒಟ್ಟಿಗೆ ನೀಡುತ್ತದೆ.
ಎಳ್ಳ ಹಚ್ಚಿದ ರೊಟ್ಟಿ ಎಣ್ಣಿ ಬದನಿಕಾಯಿ
ಮಸರ ಕಲಸಿದ ಬುತ್ತಿ ಬಿಸಿಯ ಬಾನ
ಅಲ್ಲ, ಮಾಗುಣಿ ಬೇರ, ಬೆಲ್ಲ, ಬೆಳವಲದ್ಹಣ್ಣ|
ಮನ ಬೇಡಿ ನನ ಜೀವ ಬಗಸ್ಯಾದ ತಾಯಿ |
ಬಂಕಿ ಕಾಡತಾವ
ಬಸುರಿದ್ದ ಹೆಣ್ಣು ಬಯಸುವ ಈ ತಿನಿಸುಗಳು ಬೆಳವಲನಾಡಿನ ವಿಶಿಷ್ಟ ಆಹಾರ ಕ್ರಮವನ್ನು ಸಾರುತ್ತವೆ ಮತ್ತು ಅವರ ಆರೋಗ್ಯಕ್ಕೆ ಬೇಕಾದ ಆಹಾರದ ಮತ್ತು ವಿಶ್ರಾಂತಿಯ ಅರಿವನ್ನು ಒಟ್ಟಿಗೆ ನೀಡುತ್ತವೆ. ‘ಗ್ರಾಮೀಣ ಭಾವ ಸಂಪತ್ತಿಗೆ ಈ ಹಾಡುಗಳು ಒಳ್ಳೆಯ ನಿದರ್ಶನಗಳಾಗಿವೆ.’ ಒಟ್ಟಾರೆ ಗುರುಲಿಂಗ ಕಾಪಸೆ ಅವರು ಗುರುತಿಸಿರುವಂತೆ ‘ಮಲ್ಲಿಗೆ ದಂಡೆ’ ಒಟ್ಟು ಸಂಗ್ರಹವೇ ಜನಪದ ಹಾಡುಗಳ ಪರಿಮಳ ಸೂಸುವ ಒಂದು ಅಪೂರ್ವ ಸಂಗ್ರಹ. ರೇವಪ್ಪನವರು ತೆಗೆದುಕೊಂಡ ಪರಿಶ್ರಮ, ಸಂಪಾದನಾ ಕಾರ್ಯದಲ್ಲಿ ತೋರಿದ ಶ್ರದ್ಧೆ, ಆಯ್ಕೆಯಲ್ಲಿ ತೋರಿಸಿಕೊಟ್ಟ ಔಚಿತ್ಯ ಪ್ರe್ಞÉ ಮುಂತಾದವುಗಳೆಲ್ಲ ಶ್ಲಾಘನೀಯವಾದವು.
        ಹಲಸಂಗಿ ಗೆಳೆಯರ ಜನಪದ ಕಾರ್ಯವೇ ಒಂದು ಮಾದರಿಯದು. ಆ ಗೆಳೆಯರಲ್ಲೊಬ್ಬರಾದ ಕಾಪಸೆ ರೇವಪ್ಪನವರ ಈ ಕಾರ್ಯ ಇನ್ನೂ ವಿಶೇಷವಾದುದು. ಈ ಸಂಗ್ರಹಕ್ಕೆ ಬರೆದ ಮಧುರಚೆನ್ನರ ಟಿಪ್ಪಣಿಗಳು ಕೂಡ ಅಭ್ಯಾಸ ಪೂರ್ಣವಾಗಿದ್ದು ಜನಪದ ಸಾಹಿತ್ಯ ಸಂಗ್ರಹ ಮಾಡುವವರಿಗೆ ಮಾರ್ಗದರ್ಶಕವಾಗಿವೆ. ಜೊತೆಗೆ ಹೊಸಕಾವ್ಯ ರಚನಾಕಾರರಿಗೆ ಅಪರೂಪದ ಮಾದರಿಯಾಗಿ ಗುರುತಿಸಿಕೊಂಡಿದೆ. ‘ಮಲ್ಲಿಗೆ ದಂಡೆ’ಯ ಹಾಡುಗಳಲ್ಲಂತೂ ಛಂದೋವೈವಿಧ್ಯ ಅಚ್ಚರಿಗೊಳಿಸುವಂತಿದೆ. ತ್ರಿಪದಿಯ ಹಲವಾರು ರೂಪ ಭೇದಗಳ ಜೊತೆಗೆ ರಗಳೆ ಸಾಂಗತ್ಯಗಳನ್ನು ಹೋಲುವ ಹಾಗೂ ದ್ವಿಪದಿ, ಚೌಪದಿ ಭೋಗ ಷಟ್ಪದಿಯಂಥ ಶಿಷ್ಟ ಕಾವ್ಯಕ್ಕೆ ಸೇರಿದ ಅನೇಕ ಛಂದೋ ರೂಪಗಳ ಬಳಕೆ ಇಲ್ಲಿ ಕಂಡುಬರುತ್ತದೆ. ಇದು ಯಾವುದನ್ನೂ ಜನಪದ ಕವಿಗಳು ಅಭ್ಯಾಸ ಮಾಡದೇ ಬರೆದರೆಂದು ಭಾವಿಸುವುದು ಒಟ್ಟಿನಲ್ಲಿ ಕಾವ್ಯ ರಚನೆಯ ತತ್ವಕ್ಕೇ ವಿರುದ್ಧವಾಗಿದೆ. ಹೀಗೆ ಸಹಜವಾಗಿ ಬರುವ ಜನಪದ ಗೀತೆಗಳು ಸಾಹಿತ್ಯಿಕ ಅಂಶವನ್ನು ಪ್ರಧಾನವಾಗಿ ಹೊಂದಿರುವುದು ಅವುಗಳ ಶ್ರೇಷ್ಠತೆಯನ್ನು ಗುರುತಿಸುವಂತೆ ಮಾಡುತ್ತದೆ. ‘ಹಳ್ಳಿಗರ ಹಾಡುಗಳು ಎಷ್ಟು ಮನೋಹರವಾಗಿರಬಲ್ಲವು ಅವುಗಳನ್ನು ಕಟ್ಟಿದವರೆಲ್ಲ ವ್ಯುತ್ಪತ್ತಿಯುಳ್ಳವರೆಂದಾಗಲಿ, ಸತತವಾಗಿ ಅಭ್ಯಾಸ ಮಾಡಿದವರೆಂದಾಗಲಿ ಯಾರು ಹೇಳಬಲ್ಲರು? ಎಂಬ ಅಬಿsಪ್ರಾಯಕ್ಕೆ ಬರುವ ತೀನಂಶ್ರೀ ಅವರು ಜನಪದರ ಕಾವ್ಯದ ಹುಟ್ಟಿನ ಸಹಜತೆಯನ್ನು ತೋರುತ್ತಾರೆ. ಒಟ್ಟಾರೆ ಹಲಸಂಗಿ ಗೆಳೆಯರ ಬಳಗದ ಕವಿಗಳು ಜನಪದ ಗೀತೆಗಳ ಸಂಗ್ರಹ ಸಂಪಾದನೆಯಲ್ಲಿ ತೋರಿದ ಕಾಳಜಿಯಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯದ ಸಮೃದ್ಧತೆಗೆ ಸಾಕ್ಷಿಯಾಯಿತು.
=======================================================================

                                                              ವಿಳಾಸ :
ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.63,ನವನಗರ,ಬಾಗಲಕೋಟ.  ಮೊ. 9845500890

Friday 5 April 2013

ಕನ್ನಡ ಜನಪದ ದಲ್ಲಿ ಪ್ರಕಟವಾದ ಲೇಖನ :



ಗುರುವಾರ 4 ಎಪ್ರಿಲ್ 2013

ಅಂತರಾಷ್ಟ್ರೀಯ ಪ್ರಜ್ಞೆ ಮತ್ತು ದೇಸೀಯತೆ.

  -ಡಾ.ಪ್ರಕಾಶ ಗ.ಖಾಡೆ

  ನಮ್ಮಲ್ಲಿ ಸ್ಥಳೀಯತೆ ಎಂಬುದು ನಗಣ್ಯ ಆದ ಸಂದರ್ಭದಲ್ಲಿ ಇಲ್ಲಿ ದೇಸೀ ಜೀವನಮುಖಿಯಾದ ಮೌಖಿಕ ಕಾವ್ಯ ಪ್ರಕ್ರಿಯೆಯು ತನ್ನ ಅಸ್ತಿತ್ವದ ನೆಲೆಗಾಗಿ ಯಾವುದೇ ಬಗೆಯ ಪ್ರಯತ್ನವಾದಿ ಹುಡುಕಾಟಕ್ಕೆ ತಾನು ನಿಲ್ಲದೆ, ಹಾಗೆಂದು ತೋರುಗೊಡದೆ ಅದು ಸದಾ ಪ್ರವಹಿಸುತ್ತಿರುವುದು ಅದರ ಜಾಗೃತಿ ಮತ್ತು ಜೀವಂತಿಗೆಯ ಹೆಚ್ಚುಗಾರಿಕೆಯಾಗಿದೆ. ಆದರೆ ಅದೊಂದು ಅದಿsಕೃತತೆ ಪ್ರಾಪ್ತವಾಗುವ ಸಮಯ ಸಂದರ್ಭಕ್ಕಾಗಿ ಕಾಯುತ್ತಿತ್ತು. ಹೀಗೆ ಈ ನಾಡಿನ ಬಹುಮುಖಿ ದೇಸೀ ಕವಿತ್ವ ರಚನಾಕಾರರು, ಹಾಡುಗಾರರು, ಮೇಳದವರು ಕಟ್ಟಿಕೊಂಡ ಕೇಳುಗ ನೆಲೆಯನ್ನು ಸದಾ ಹಸಿಯಾಗಿಯೇ ಇಟ್ಟುಕೊಂಡು ಬಂದು ತನ್ನ ಸಮೃದ್ಧ ನೆಲದ ಪೈರಿಗಾಗಿ ಕಾದು ಕೊಂಡು ಬಂದ ಈ ಬಗೆಯ ಫಲವತ್ತತೆಗೆ ಸಾಕ್ಷಿಯಾಗಿ ಮೌಖಿಕ ಕಾವ್ಯ ಸಂವಹನ ಸಂದರ್ಭಗಳು ಹೆಚ್ಚು ತೋರುಗೊಳ್ಳುತ್ತ ಒಂದು ನಿರಂತರತೆಯ ಪ್ರಕ್ರಿಯೆಗೆ ಒಳಗಾಗುವುದು ಇದೆ.
    ಇಲ್ಲಿ ಮೊದಲಿನಿಂದಲೂ ಮಾರ್ಗ-ದೇಸೀ, ಶಿಷ್ಟ-ಜಾನಪದ, ನಗರ-ಗ್ರಾಮೀಣ ಎಂಬ ಈ ಬಗೆಯ ವಾಗ್ವಾದಗಳು ನಡೆದುಕೊಂಡು ಬಂದಿವೆ. ಇಂಥ ವಾಗ್ವಾದಗಳನ್ನು ಕೆಲ ಉದಾಹರಣೆಗಳ ಮೂಲಕ ಒಟ್ಟು ಕಾವ್ಯ ಸಂದರ್ಭವನ್ನು ಪ್ರತ್ಯೇಕವಾಗಿಟ್ಟುಕೊಂಡು ನೋಡಿದರೂ ಒಂದರೊಳಗೊಂದರ ಬೆಸುಗೆ ಬಿಡಿಸುವಲ್ಲಿ ಒಂದು ಬಗೆಯ ೞsದ್ರತೆಯ ಸೃಷ್ಟಿಗೆ ಒಳಗಾಗುತ್ತೇವೆ. ಏಕೆಂದರೆ ದೇಸಿ, ಜಾನಪದ, ಗ್ರಾಮ್ಯವೆನ್ನುವುದು ನಮ್ಮ ಕಾವ್ಯ ರಚನಾ ವ್ಯಕ್ತತೆಯ ಉದ್ದಕ್ಕೂ ತನ್ನ ಅಸ್ತಿತ್ವ, bsಪು ಮೂಡಿಸಿಕೊಂಡೆ ಬಂದಿದೆ. ಕಿ.ರಂ. ನಾಗರಾಜರು ಗುರುತಿಸುವಂತೆ.
   ಕನ್ನಡದ ಮಟ್ಟಿಗೆ ಹೇಳುವುದಾದರೆ ಶಿಷ್ಟ ಎಂಬ ಪ್ರಭೇದವೇ ಒಂದು ರೀತಿಯಲ್ಲಿ ಅಸ್ಪಷ್ಟವೂ, ಕೃತಕವೂ ಆಗಿದೆ. ಏಕೆಂದರೆ ವಚನಕಾರರಾಗಲಿ, ಹರಿಹರ, ರಾಘವಾಂಕ, ಕುಮಾರವ್ಯಾಸ, ಕೀರ್ತನಕಾರರು, ಲಕ್ಷ್ಮೀಶ, ಸರ್ವಜ್ಞ ಇವರ ಕೃತಿಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಅತ್ಯಂತ ಪ್ರಮುಖ ಭಾಗವಾಗಿ ಹರಡಿಕೊಂಡಿವೆ.ನಮ್ಮ ಹಿಂದಿನವರ ಈ ಕಾವ್ಯಗಳು ಸ್ಥಳೀಯವಾದವನ್ನೇ ಹೆಚ್ಚು ಜನಪದಗೊಳಿಸಿರುವುದು ಹಾಗೂ ನಂತರದ ಇವತ್ತಿಗೂ ಪುರಾಣ, ಪ್ರವಚನಗಳಲ್ಲಿ ಹೇಳಿಕೊಂಡು ಬರುತ್ತಿರುವ ’ಶೂನ್ಯ ಸಂಪಾದನೆ’ ಬಸವ ಪುರಾಣ, ’ರಾಜಶೇಖರ ವಿಳಾಸ’, ’ನೇಮಿಜಿನೇಶ ಸಂಗತಿ’, ’ಹರಿಭಕ್ತಿಸುಧೆ’, ’ಹರಿಕಥಾಮತೃಸಾರ’ - ಇವುಗಳು ಈಗಿನ ಸಂದರ್ಭದಲ್ಲೂ ಹೆಚ್ಚು ಜನಪದವಾಗಿರುವುದು ಅವುಗಳ ಜಾನಪದೀಯತೆಯನ್ನೇ ಸಾರುತ್ತವೆ.

   ಪ್ರದೇಶ ಮತ್ತು ಸಂದರ್ಭಗಳು ವಿಸ್ತೃತವಾಗುತ್ತ ಸಾಗಿದಂತೆ ಮಾರ್ಗ-ದೇಸೀ ಒಂದರೊಳಗೊಂದು ಹುಟ್ಟು ಪಡೆಯುವ ಸಾಧ್ಯತೆ ಇದೆ. ’ಐರೋಪ್ಯ ಮಾರ್ಗದ ಎದುರಿನಲ್ಲಿ ಸಂಸ್ಕೃತವು ದೇಸೀಯಾಗಿ ಕಂಡರೆ, ಸಂಸ್ಕೃತ ಮಾರ್ಗದ ಎದುರಿನಲ್ಲಿ ದೇಶಭಾಷೆಗಳು ದೇಸೀಯವಾಗಿ ಕಾಣುತ್ತವೆ. ಅದೇ ದೇಶ ಭಾಷಾ ಸಾಹಿತ್ಯಗಳ ಲಿಖಿತ ಮಾರ್ಗದ ಎದುರಿನಲ್ಲಿ ಅದೇ ದೇಶ, ಭಾಷಾ ಸಾಹಿತ್ಯಗಳ ಅಲಿಖಿತ ನೆಲೆಗಳು ದೇಸೀ ಆಗುತ್ತವೆ. ಮಾರ್ಗವೇ ದೇಸೀಯಾಗುವ, ದೇಸೀಯೇ ಮಾರ್ಗವಾಗುವ, ಮಾರ್ಗದೊಳಗೆ ಮಾರ್ಗವಿರುವ, ದೇಸೀಯೊಳಗೆ ದೇಸೀಯಿರುವ ಸಂಕೀರ್ಣವಾದ ನೇಯ್ಗೆಯನ್ನು ಇಲ್ಲಿ ಗ್ರಹಿಸಬೇಕಾಗಿದೆ. ಹೀಗಾಗಿ ಒಂದು ಸಂದರ್ಭದ ಕಾವ್ಯದಲ್ಲಿ ಈ ದೇಸೀಯ ಹುಡುಕಾಟವು ಒಂದು ರೀತಿಯಲ್ಲಿ ಮಾರ್ಗಮುಖಿ ನೆಲೆಗಳನ್ನು ಗುರುತಿಸುತ್ತದೆ. ಯಾಕೆಂದರೆ ವಿಸ್ಮೃತಿಗೆ ಒಳಗಾದ ಈ ಬಗೆಯ ಸಾಹಿತ್ಯ ಶೋಧನೆ ಅದು ಪ್ರಭಾವಿಸಿಕೊಂಡ ನೆಲೆಗಳಿಂದ ಹುಡುಕಿ ಕಟ್ಟಿಕೊಡಬೇಕಾಗುತ್ತದೆ.

    ಹೀಗೆ ಪಂಪ ಸಾರಿದಂತೆ ’ದೇಸೀಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ಪುದು’ ಎಂದು ಸಾರಿದಂತೆ ಪಾರಂಪರಿಕ ಕ್ರಿಯೆ ಪ್ರಕ್ರಿಯೆ ರೂಪದ ಸ್ವದೇಶೀ ಸತ್ಯಗಳನ್ನು ಶೋದಿsಸುವುದು ಈ ಸಂದರ್ಭದ ಅಗತ್ಯವಾಗಿದೆ. ವಸಾಹತುಶಾಹಿ ಸಂದರ್ಭದ ನೆಲೆಯಲ್ಲಿ ದೇಸೀವಾದಿ ಚಿಂತನೆಗಳು ಹುಟ್ಟಿಕೊಳ್ಳುವ ಮೂಲಕ ಸ್ಥಳೀಯ ಕಾವ್ಯಕ್ಕೆ ಒಂದು ಬಗೆಯ ಜೀವಂತಿಕೆಯ ಅರಿವಾಯಿತು. ವಸಾಹತುಶಾಹಿ ತನ್ನ ಉದ್ದೇಶದ ಈಡೇರಿಕೆಗಾಗಿ ಬಳಸಿದ ತಂತ್ರಗಳು ಒಟ್ಟು ದೇಸಿತನವನ್ನು ಹತ್ತಿಕ್ಕುವುದೇ ಆಗಿತ್ತು. ಆದರೆ ಪುರಾತನ ಜಾಗೃತಿಯೊಂದಿಗೇ ನಡುವೆಯೇ ಬಂದ ಇಂಥ ಚಿಂತನೆಗಳು ವ್ಯಾಪಕವಾಗಿ ಹಬ್ಬದಿರಲು ಇಲ್ಲಿನ ಗಟ್ಟಿಗೊಂಡ ಸಾಂಸ್ಕೃತಿಕ ಸಂದರ್ಭಗಳು ವಿಸ್ತಾರವಾಗಿ ಹಬ್ಬಿದ ಭೌಗೋಳಿಕ ಸನ್ನಿವೇಶಕ್ಕೆ ಪೂರಕವಾಯಿತು.
ವಸಾಹತುಶಾಹಿ ಸಂದರ್ಭವು ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಗೊಂದಲಗಳನ್ನು ಸೃಷ್ಟಿಸಬೇಕಾಯಿತು. ’ವಸಾಹತುಶಾಹಿ ಮುಖ್ಯ ಗುರಿಯೆಂದರೆ ದೇಸೀಯ ಸಂಸ್ಕೃತಿಗಳ ಬಹುಮುಖತ್ವವನ್ನು ಹತ್ತಿಕ್ಕುವುದು, ಅವುಗಳ ಅನನ್ಯತೆಯನ್ನು ನಾಶಮಾಡಿ ಅವುಗಳನ್ನು ಸಾಂಸ್ಕೃತಿಕ ವಸಾಹತುಗಳನ್ನಾಗಿ ಪರಿವರ್ತಿಸುವುದು, ಇಂಥ ಸಂದರ್ಭದಲ್ಲಿ ಪರಸ್ಪರ ವಿನಿಮಯದ ಬದಲು ಯಜಮಾನಿಕೆಯೇ ಮುಖ್ಯವಾಗುತ್ತದೆ. ವಸಾಹತುಶಾಹಿಯ ಉದ್ದೇಶಗಳು ಪೂರ್ತಿ ಈಡೇರದಿದ್ದರೂ ದೇಸೀಯ ಸಂಸ್ಕೃತಿಯಲ್ಲಿ ಏರುಪೇರುಗಳು ಉಂಟಾಗುತ್ತವೆ. ದೇಸೀವಾದಿ ನಿಲುವುಗಳು ಹುಟ್ಟಿಕೊಳ್ಳುವುದು ಇಂಥ ಸನ್ನಿವೇಶದಲ್ಲಿ’ ಎಂಬುದನ್ನು ರಾಜೇಂದ್ರ ಚೆನ್ನಿ ಅವರ ಹೇಳಿಕೆಯಿಂದ ಸ್ಪಷ್ಟ ಪಡಿಸಲು ಸಾಧ್ಯ.

    ಈ ಸಂಘರ್ಷದ ನೆಲೆಯಲ್ಲಿ ತನ್ನ ಭಾಷೆ, ಸಂಸ್ಕೃತಿಯ ಅಬಿsಮಾನದ ನೆಲೆ ಮುಂಚಿನಿಂದಲೂ ಇಲ್ಲಿ ಬಂದಿದೆ. ಅನ್ಯ ಸಂಸ್ಕೃತಿಯ ಒತ್ತಡಗಳು ತುಂಬಾ ಸಪ್ಪಳ ಮಾಡಿಕೊಂಡು ಬರಲು ಆಕರ್ಷಣೆಗೆ ತೆರೆದುಕೊಂಡರೂ ಇಲ್ಲಿನ ಜನಸಮುದಾಯದ ಸ್ಥಳೀಯತೆಯನ್ನು ಬಿಟ್ಟು ಕೊಡಲಿಲ್ಲ. ಮಾತು ವ್ಯವಹಾರ ಅದು ಎಷ್ಟೇ ಸ್ಥಳೀಯವಾದುದು ಆಗಿರುತ್ತದೆಯೋ ಅಲ್ಲಿ ಸಹಜ ಬದುಕಿಗೆ ದಾರಿಯಾಗುತ್ತದೆ. ದೇಸಿಯತೆಯ ನೆಲೆಗಳನ್ನು ತಟ್ಟಿಕೊಂಡು ಬಂದ ವಸಾಹತುಶಾಹಿ ಬಾಹುಗಳು ಇಲ್ಲಿ ಸ್ಥಳೀಯವಾದುದನ್ನು ಹತ್ತಿಕ್ಕಲು ನೋಡಿದ್ದೇ ಹೆಚ್ಚು. ಆದರೆ ಆ ಸಂದರ್ಭಕ್ಕೆ ನಮ್ಮವರು ಕಾದುಕೊಂಡು ಬಂದ ಸ್ಥಳೀಯ ಕೋಮಲ, ನಿರ್ಮಲ ಭಾವಗಳು ಭಾವುಕ ನೆಲೆಯಲ್ಲಿ ನಿಲ್ಲದೆ ಅರ್ಥ ಮಾಡಿಸಿದ್ದು  ಸಾಧನೆ. ಲಂಕೇಶ್ ಅವರು ಒಂದು ಕರ್ತವ್ಯವನ್ನು eಪಿಸುತ್ತಾರೆ.’ನಾವು ಈಗ ಈ ಜಗತ್ತಿನಲ್ಲಿರುವ ನೂರಾರು ಸಾಂಸ್ಕೃತಿಕ ವಲಯಗಳನ್ನು ಗಮನಿಸಿದರೆ, ಸ್ಥಳೀಯ ನಂಬಿಕೆ ಮತ್ತು ಆಚರಣೆಗಳನ್ನು ಅಭ್ಯಸಿಸಿದರೆ ಈ ಸಂಸ್ಕೃತಿಗಳು ಅಂತರ್‌ರಾಷ್ಟ್ರೀಯ ಪ್ರeಯ ಜೊತೆಗೆ ಸಂಘರ್ಷಿಸುವುದು ಖಂಡಿತ ಅನ್ನಿಸುತ್ತದೆ. ಬೇಂದ್ರೆಯವರ ಸಾಧನಕೇರಿಯ ಚೆಂದ, ಅರ್ಥದ ಈ ಅಂತರಾಷ್ಟ್ರೀಯ ಮನಸ್ಸರಿಗೆ ತಿಳಿಯುವುದು ಕಷ್ಟ.

    ಅಂತರ್‌ರಾಷ್ಟ್ರೀಯವೆಂದರೆ ಏನು? ಈ ಅಂತರ್‌ರಾಷ್ಟ್ರೀಯ ಮನುಷ್ಯನಿಗೆ ಇಡೀ ಜಗತ್ತು ಒಂದು’ ಎಂಬ ಲಂಕೇಶ್‌ರ ಚಿಂತನೆಯು ಬಳಕೆಯ ಸಂದರ್ಭಗಳಲ್ಲಿ ಸ್ಥಳೀಯವಾದಕ್ಕೆ ಹೊರಗಿನ ಪ್ರಭಾವಗಳು ಉಂಟುಮಾಡಿದ ಒತ್ತಡಗಳು ಅರ್ಥರೂಪಿ ಸಂದರ್ಭದಲ್ಲಿ ಮೌಲ್ಯಕಳಕೊಳ್ಳುವ ಸೂಚನೆ ಸಾರುತ್ತದೆ. ಅವರೇ ಈ ಚಿಂತನೆಯ ಮುಂದುವರಿಕೆಯಾಗಿ ಹೇಳುತ್ತಾರೆ. ಮಾತೃಭಾಷೆ ಮತ್ತು ಪರಿಸರ ಒಂದು ಸಮುದಾಯಕ್ಕೆ ಮತ್ತು ಆ ಸಮುದಾಯದ ಸೂಕ್ಷ್ಮ ವ್ಯಕ್ತಿಗಳಿಗೆ ಕಾಣುವ ಹಾಗೆ ಒಂದು ಅಂತಾರಾಷ್ಟ್ರೀಯ ಮನಸ್ಸಿಗೆ ಕಾಣುವುದಿಲ್ಲ. ಆ ಮನಸ್ಸಿಗೆ ಎಲ್ಲ ಒಂದೇ. ತಲೆ, ಹೃದಯ ಎರಡೂ ಇಲ್ಲದ ವಸ್ತು. ಆದ್ದರಿಂದಲೇ ಅಂತರ್‌ರಾಷ್ಟ್ರೀಯ ಪ್ರeಯೇ ಒಂದು ಅಸ್ತ್ರವಾಗುತ್ತಿರುವಾಗ ನಾವು ನಮ್ಮ ಸ್ಥಳೀಯ ಕೋಮಲ ವೈಯಕ್ತಿಕ ಕೃತಿಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಈ ಸ್ಥಳೀಯ ಕೋಮಲ ಕೃತಿಗಳೇ ಆಧುನಿಕ ಕಾವ್ಯವನ್ನು ರೂಪಿಸುವಲ್ಲಿ ಕಾರಣವಾದ ಸಂದರ್ಭವನ್ನು ಕಟ್ಟಿಕೊಡಲು  ದೇಸೀಯ ಹಾಡು ಸಂಪ್ರದಾಯಗಳು ಹುಟ್ಟುಹಾಕಿದ, ಸಾಂಸ್ಕೃತಿಕ ಬದುಕು ರೂಪಿಸಿದ, ಹೊಸತಾದ ಕಾವ್ಯ ಕ್ರಿಯೆಗೆ ಜಾನಪದ ಸಂದರ್ಭ ಪ್ರಧಾನವಾಗಬೇಕಾಯಿತು.

 -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.೬೩,ನವನಗರ,ಬಾಗಲಕೋಟ ಮೊ.೯೮೪೫೫೦೦೮೯೦.

Tuesday 2 April 2013

'ಅವಧಿ'ಯಲ್ಲಿ ಲೇಖನ ; ಜನಪದ ಸಮುದಾಯ ಮತ್ತು ಜನಪರ ಸಾಂಗತ್ಯ -ಡಾ.ಪ್ರಕಾಶ ಗ.ಖಾಡೆ


ಜನಪದ ಸಮುದಾಯ ಮತ್ತು ಜನಪರ ಸಾಂಗತ್ಯ
ಡಾ.ಪ್ರಕಾಶ ಗ. ಖಾಡೆ,
ಭಾರತೀಯ ಸಂವೇದನೆಯಲ್ಲಿ ಇಂಗ್ಲಿಷ್ ಶಿಕ್ಷಣ ಕ್ರಮ ಮತ್ತು ವಸಾಹತುಶಾಹಿ ಕಾರಣವಾಗಿ ಉಂಟಾದ ಸಂಘರ್ಷ ನೆಲೆ ಕನ್ನಡ ಭಾಷಿಕ, ಸಾಂಸ್ಕೃತಿಕ ಪರಿಸರದ ಮೇಲೂ ದಟ್ಟ ಪ್ರಭಾವ ಮೂಡಿಸಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಆರಂಭವಾದ ಸಾಂಸ್ಕೃತಿಕ ಪುನರುಜ್ಜೀವನವು ಒಂದು ಬಗೆಯಲ್ಲಿ ವಸಾಹತುಶಾಹಿಯ ಕೊಡುಗೆ ಎನಿಸಿದರೂ ಅದರ ವಿರುದ್ಧ ದೇಸಿಯ ಒಳ ಬಂಡಾಯ ತೀವ್ರವಾಗಿ ನಡೆದುಕೊಂಡೆ ಬಂದಿತ್ತು. ದೇಸಿವಾದದ ಹಿಂದೆ ಸಂಸ್ಕೃತಿ ಬಗೆಗಿನ ಚಲನಶೀಲವಾದ ಪರಿಕಲ್ಪನೆಯಿದೆ. ಬದುಕಿನ ಸತ್ವಶೀಲಗಳನ್ನು ಕಬಳಿಸುವ ಒಳಗಣ ಮತ್ತು ಹೊರಗಣ ಎಲ್ಲ ಚಲನೆಗಳ ವಿರುದ್ಧ ದೇಸಿವಾದವು ಬಂಡು ಹೂಡುತ್ತದೆ, ಹೀಗಾಗಿ ಇಲ್ಲಿ ವಸಾಹತುಶಾಹಿಯ ಭದ್ರ ಬಾಹುಗಳು ಒಟ್ಟು ಸ್ಥಳೀಯತೆಯನ್ನು ಚಾಚಿ ತಬ್ಬಿಕೊಳ್ಳಲು ಮಾಡಿದ ಹೇಳಿಕೆಗಳು ಭಾರತೀಯ ಗ್ರಾಮ ಸಮುದಾಯಕ್ಕೆ ಕೆಲವು ಬಾರಿ ತಟ್ಟದೇ ದೂರವೇ ಉಳಿಯುವಂತಾಯಿತು.
ಈ ಚರ್ಚೆಗೆ ಪೂರಕವಾಗಿ ವಸಾಹತುಶಾಹಿ ಸಂಘರ್ಷವು ಒಟ್ಟು ಭಾರತೀಯ ಆ ಮೂಲಕ ಕನ್ನಡತನವನ್ನು ಆಕ್ರಮಿಸಿಕೊಂಡಿತೆಂದು ಹೇಳುವುದು ಅರ್ಧಸತ್ಯವಾಗುತ್ತದೆ. ಬ್ರಿಟಿಷ್ ಮಿಶನರಿಗಳು ಭಾರತದ ನಾಗರಿಕತೆಯನ್ನು ನಾಶ ಮಾಡಲು ಪ್ರಯತ್ನಿಸಿದರು. ಆದರೆ ಎರಡು ಕಾರಣಗಳಿಂದಾಗಿ ಅವರು ಇದರಲ್ಲಿ ಸಫಲರಾಗಲು ಸಾಧ್ಯವಾಗಲಿಲ್ಲ. ಒಂದು ಭಾರತೀಯ ಸಂಸ್ಕೃತಿ ಮತ್ತು ನಾಗರಿಕತೆಗಳ ಶಿಲ್ಪಿಗಳು ಹಾಗೂ ರಕ್ಷಕರು ಮಹಿಳೆಯರು, ಇನ್ನೊಂದು ಭಾರತದ ಜನಸಂಖ್ಯೆಯ ಪ್ರತಿಶತ ಎಪ್ಪತ್ತೈದರಷ್ಟು ಮಂದಿ ಹಳ್ಳಿಗಳಲ್ಲಿ ವಾಸ ಮಾಡುವವರು. ಹಾಗಾಗಿ ಬ್ರಿಟಿಷ್ ಆಡಳಿತಗಾರರ ಹಾಗೂ ಮಿಶನರಿಗಳ ಪ್ರಭಾವ ಅವರನ್ನು ಮುಟ್ಟಲೇ ಇಲ್ಲ.
ಹಾಗಾಗಿ ಈ ವಸಾಹತುಶಾಹಿಯ ಬಾಹುಗಳು ನಮ್ಮ ಗ್ರಾಮ ಜೀವನವನ್ನು ವ್ಯಾಪಕವಾಗಿ ಆಕ್ರಮಿಸಿಕೊಳ್ಳದೆ ಇರುವ ಕಾರಣವು ಇಲ್ಲಿ ಜನಪದರ ಹಾಡು ಸಂದರ್ಭಗಳಿಗೆ ಧಕ್ಕೆ ಬಾರದೇ ಅವು ರೂಡಿಗತವಾಗುತ್ತ ಉಳಿದುಕೊಂಡು ಬಂದವು. ಎಲ್ಲೆಲ್ಲಿ ಈ ಪ್ರಭಾವವು ದಟ್ಟವಾಯಿತೋ ಅಲ್ಲೆಲ್ಲ ಪ್ರತಿರೋಧವಾಗಿ ವಸಾಹತುಶಾಹಿಯ ಧೋರಣೆಯನ್ನು ಖಂಡಿಸಲಾಯಿತು. ಆದರೆ ವಸಾಹತುಶಾಹಿ ಮನಸ್ಸುಗಳಿಂದ ರೂಪಿತವಾದ ನಮ್ಮ ನಗರ ಸಮುದಾಯವು ಗ್ರಾಮ ಬದುಕಿನ ಒಳ ಆವರಣವನ್ನು ಕಲುಷಿತಗೊಳಿಸುವ ಸಂದರ್ಭಗಳೂ ಬಂದಾಗಲೂ ಇಲ್ಲಿ ತಲ್ಲಣ, ತಳಮಳ ಆರಂಭವಾಯಿತು. ನಗರ ಬದುಕಿನ ಆಕರ್ಷಣೆಗಳು, ಆಧುನಿಕರಣದ ಸೋಂಕಿಲ್ಲದ ಗ್ರಾಮ ಬದುಕನ್ನು Ùಳದ್ರಗೊಳಿಸುವ ಸಂಚೂ ಸದ್ದಿಲ್ಲದೆ ನಡೆಯಿತು.
ಈ ಬಗೆಯಲ್ಲಿ ಯಾವುದನ್ನು ಭಾರತೀಯವಾಗಿಟ್ಟುಕೊಳ್ಳಬೇಕೆಂಬ ದ್ವಂದ್ವ ಆರಂಭವಾಯಿತು. ಗಾಂದಿ ಹೇಳಿದರು ‘ತನ್ನಷ್ಟೇ ಪುರಾತನವಾದ ಗ್ರಾಮ ಭಾರತ ಅಥವಾ ವಿದೇಶೀ ಪ್ರಭುತ್ವದ ದಾಸ್ಯದಡಿಯಲ್ಲಿ ಸೃಷ್ಟಿಯಾಗಿ ಬೆಳೆದು ಬಂದ ನಗರ ಜೀವನದ ಭಾರತ ಇವೆರಡರಲ್ಲಿ ಒಂದನ್ನು ನಾವು ಆರಿಸಿಕೊಳ್ಳಬೇಕಾಗಿದೆ. ಹಳ್ಳಿಗಳ ಮೇಲೆ ಆಕ್ರಮಣ ಮಾಡಿ ಅಲ್ಲಿನ ಸಂಪತ್ತನ್ನೆಲ್ಲ ಹೀರುತ್ತಿರುವ ಇಂದಿನ ನಗರಗಳು ಹಳ್ಳಿಗಳನ್ನು ಹಾಳುಗೆಡವುತ್ತಿವೆ. ಈ ದಬ್ಬಾಳಿಕೆ ನಿಂತು ನಗರಗಳು ಗ್ರಾಮ ಜೀವನದ ಪೋಷಕವಾದ ಸೇವೆಸಲ್ಲಿಸುವಂತಿರಬೇಕೆಂದು ನನ್ನ ಖಾದಿ ಮನೋಭಾವ ನನಗೆ ಬೋದಿಸುತ್ತದೆ. ಹಳ್ಳಿಗಳ ಶೋಷಣೆ ಒಂದು ವ್ಯವಸ್ಥಿತ ಹಿಂಸಾಚಾರ.
ನಾವು ಸ್ವರಾಜವನ್ನು ಅಹಿಂಸೆಯ ತಳಹದಿಯ ಮೇಲೆ ನಿರ್ಮಿಸುವುದಾದರೆ ಗ್ರಾಮಗಳಿಗೆ ಯೋಗ್ಯ ಸ್ಥಾನವನ್ನು ಕೊಡಲೇಬೇಕು.’(ಹರಿಜನ ಪತ್ರಿಕೆ-20.01.1940) ಹೀಗೆ ಗ್ರಾಮ ಸಮುದಾಯದ ಮನೋಧರ್ಮ ಮತ್ತು ಮನಸ್ಥಿತಿಗಳು ಕೋಮಲ ಹಾಗೂ ಹೃದಯಪೂರ್ಣವಾದುದ್ದರ ಕಾರಣವಾಗಿ ಅಹಿಂಸೆಯ ಆಚರಣೆಗೆ ಅದೇ ಶಕ್ತಿ ಮತ್ತು ಬಲ ತುಂಬಬಲ್ಲದೆಂದು ಅರಿತಿದ್ದ ಗಾಂದಿಜಿಯವರು ಗ್ರಾಮ ಸಮುದಾಯದ ಆಶಯಗಳಿಗೆ ಮಹತ್ವ ನೀಡಿದ್ದರು.
ಗಾಂದಿಯವರಿಗೆ ಸ್ಥಳೀಯತೆಯು ಎಲ್ಲಾ ಯೋಚನೆ-ಯೋಜನೆಗಳ ಮೂಲ ಮಂತ್ರವಾಗಿತ್ತು. ಆ ಹೊತ್ತಿಗೆ ವಸಾಹತು ಮನೋಭೂಮಿಕೆ ಉಂಟುಮಾಡಿದ ನಗರ-ಗ್ರಾಮ್ಯಗಳ ತಾಕಲಾಟದ ಒಳ ಸಂಘರ್ಷಣೆಗೆ ಅವರು ಪ್ರತಿಕ್ರಿಯಾತ್ಮವಾಗಿ ಅನೇಕ ಚಿಂತನ, ಭಾಷಣಗಳನ್ನು ಮುಂದಿಡುತ್ತಾ ಬಂದರು. ಗಾಂದಿಯವರ ಈ ಚಿಂತನೆಗಳನ್ನು ಅಕ್ಷರ ಬಾರದ, ಸಂಪರ್ಕ ರಹಿತ ಗ್ರಾಮ ಸಮುದಾಯಕ್ಕೆ ತಲುಪಿಸುವಲ್ಲಿ ನಮ್ಮ ಜನಪದ ಮೌಖಿಕ ಕಾವ್ಯ ತುದಿಗಾಲ ಮೇಲೆ ನಿಂತು ಕೆಲಸ ಮಾಡಿ ಪ್ರಧಾನ ಬಿತ್ತಿಗೆ ತನ್ನನ್ನು ಸಮರ್ಪಿಸಿಕೊಂಡಿತು. ಈ ಕಾರ್ಯ ವ್ಯಾಪಕವಾಗಿ ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಹಬ್ಬಿತು. ಲಾವಣಿಕಾರರು ತಮ್ಮ ಹಾಡುಗಳಿಗೆ ಸಾಂದರ್ಬಿಕತೆಯನ್ನು ಬಳಸಿಕೊಂಡು ರಾಷ್ಟ್ರೀಯ ಚಳವಳಿಗೆ ಗ್ರಾಮ ಸಮುದಾಯವನ್ನು ಸಜ್ಜುಗೊಳಿಸಿದರು.
ಗಾಂದಿಜಿಯವರ ಸಂದೇಶ ಮತ್ತು ಆಶಯಗಳಿಗೆ ದತ್ತವಾದ ರಾಷ್ಟ್ರೀಯ ಆಂದೋಲನ ಪ್ರಚಾರಕ್ಕಾಗಿ ಗೀತ-ಮೇಳಗಳನ್ನು ಕಟ್ಟಿ ತಮ್ಮ ಹಾಡುಗಳ ಮೂಲಕ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಕೀರ್ತಿ ಲಾವಣಿಕಾರರಿಗೆ ಸಲ್ಲುತ್ತದೆ. ದೇಸೀಯ ಚಿಂತನೆಗಳಿಗೆ ಗಾಂದಿಜಿ ಒತ್ತು ಕೊಡುವುದರ ಮೂಲಕ ಗ್ರಾಮ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಗ್ರಾಮ ಸಂಸ್ಕೃತಿಯ ಜ್ಞಾನ ಕ್ಷೇತ್ರಗಳು ಮೌಖಿಕ ಆಶಯಗಳಾಗಿದ್ದವು. ಉದ್ದಕ್ಕೂ ಮೌಖಿಕ ಮತ್ತು ಲಿಖಿತ ನೆಲೆಗಳ ಬಗೆಗೆ ಸಂಘರ್ಷಗಳು ಕಂಡು ಬಂದವು. ಜಾನಪದವು ಮೌಖಿಕ ಕಾವ್ಯದ ಒಂದು ಸಮೃದ್ಧ ಸೃಷ್ಟಿ. ಆದರೆ ಲಿಖಿತವಾಗಿ ಅದು ಒಂದು ಕಟ್ಟಳೆಗೆ ಒಳಗಾದಾಗ ಅದರ ಹೊಸತನವೆಂಬುದು ಎಷ್ಟು ಪ್ರಸ್ತುತ ಎಂಬ ಕುರಿತು ಜಿಜ್ಞಾಸೆಗಳು ಆರಂಭವಾದವು.
ಲಿಖಿತವೆನ್ನುವುದು ಜಾನಪದವನ್ನು ಒಂದು ಬಗೆಯಲ್ಲಿ ಕಟ್ಟಳೆಗೆ ಒಳಪಡಿಸುತ್ತದೆ. ಜನಪದ ಕಾವ್ಯಗಳು ಉದ್ದಕ್ಕೂ ಮೌಖಿಕ ಸಂವಹನದಿಂದಲೇ ಉಳಿದುಕೊಂಡು ಬಂದು ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತ ಕಾಲಕಾಲಕ್ಕೆ ತನ್ನ ಹೊಸತನದ ಇರುವನ್ನೇ ಪ್ರಕಟಪಡಿಸುತ್ತ ಬಂದವು. ಹೀಗೆ ಮೌಖಿಕ ಕಾವ್ಯ ಸಂವಹನದಿಂದ ಪ್ರಭಾವಿತರಾಗಿ ಲಿಖಿತವೆನ್ನುವುದು ಬಂದಾಗ ನಮ್ಮವರು ಬರೆದದ್ದು ಅವರ ಸೃಜನಶೀಲತೆಯೊಂದಿಗೆ ಜನಪದ ಮೌಖಿಕ ಸಂವಹನದ ಎಳೆಗಳೂ ಸೇರಿ ‘ಜಾನಪದವೇ’ ಎನ್ನುವಷ್ಟು ಗಾಢತೆ ಮೆರೆದವು.ಕಿ.ರಂ.ನಾಗರಾಜ ಅವರ ಪ್ರಕಾರ ‘ಬಹುತೇಕ ಕನ್ನಡದ ಮಹತ್ವದ ಸಾಹಿತ್ಯ ಕೃತಿಗಳು ಅನಕ್ಷರಸ್ಥ ಸಂಸ್ಕೃತಿಯ ಬಗೆಗೆ ಗಾಢವಾದ ತಿಳುವಳಿಕೆಯಿಂದ ಕೂಡಿದ್ದಾಗಿದೆ. ಇಂದಿಗೂ ನಿಜವಾದ ಅರ್ಥದಲ್ಲಿ ಅನಕ್ಷರಸ್ಥರೇ ಕನ್ನಡ ಕವಿತೆಯ ನಿಜವಾದ ಗ್ರಾಹಕರು.’
ಮೌಖಿಕ ಕಾವ್ಯ ಸಂವಹನವು ಹೆಚ್ಚು ಕೇಳುಗರನ್ನು ಪಡೆದುಕೊಳ್ಳುತ್ತದೆ ಮತ್ತು ಅರ್ಥವಾಗಲು ಯಾರ ನೆರವನ್ನೂ ಬಯಸುವುದಿಲ್ಲ. ಕೆಲವು ಕಟ್ಟಳೆಗಳು ತನ್ನಷ್ಟಕ್ಕೆ ತಾವೇ ರೂಪುಗೊಳ್ಳುತ್ತವೆ. ಹೀಗಾಗಿ ಈ ಕಟ್ಟಳೆಗಳಿಂದ ಜಾನಪದವು ಅಳಿದು ಹೋಗುತ್ತದೆ ಎಂಬ ಆತಂಕವಿದೆ. ಇದಕ್ಕೆ ಮೊಗಳ್ಳಿ ಗಣೇಶ್ ಹೀಗೆ ಹೇಳುತ್ತಾರೆ: ಜಾನಪದ ಪಠ್ಯ ಹಾಳಾಗಿ ಹೋಗುತ್ತದೆ ಎಂಬ ಆತಂಕ ಬೇಕಾಗಿರುವುದಿಲ್ಲ. ಜಾನಪದ ಸ್ವಭಾವವೇ ಅತ್ಯಂತ ಚಲನಶೀಲತೆಯನ್ನು ಬಯಸುವಂಥದ್ದು, ಆದರೆ ಇಲ್ಲಿ ಪಠ್ಯದ ರೂಪ ರಚನೆಯಲ್ಲಿ ಮಹತ್ವದ ಬದಲಾವಣೆಗಳು ದಿಡೀರನೆ ಉಂಟಾಗದಿದ್ದರೂ ತನ್ನ ರಚನೆಗೆ ಶೈಲಿಗೆ ಹೊಸತನ್ನ ಸ್ವೀಕರಿಸುವ ಗುಣ ಪಠ್ಯಕ್ಕೆ ಇರುತ್ತದೆ. ಅಂದರೆ ಕಾಲದ ಮೌಲ್ಯಗಳು ಸೂಕ್ಷ್ಮವಾಗಿ ಪಠ್ಯದ ಭಾಗಗಳಾಗಿ ಬಿಡುತ್ತವೆ. ಮೌಖಿಕ ಲಿಖಿತ ಎನ್ನುವಲ್ಲಿ ಕಾವ್ಯ ಸಂವಹನಗೊಳ್ಳುವ ತೀವ್ರತೆಯಲ್ಲಿ ಅದರ ಅರ್ಥವಂತಿಕೆ ಬಿಚ್ಚಿಕೊಳ್ಳುತ್ತದೆ.
ಅಝಾದ್ ಹಿಂದ್ ಗೀಗೀ ಮೇಳ
ಲಾವಣಿ ಕಾವ್ಯ ಪ್ರಕಾರ ಶೃಂಗಾರ ಚಾರಿತ್ರಿಕ ನೆಲೆಯಲ್ಲಿ ಹರಿದು ಬರುತ್ತಿರಬೇಕಾದರೆ ಬ್ರಿಟಿಷರ ದಬ್ಬಾಳಿಕೆ, ಅದಿಕಾರಶಾಹಿ ವ್ಯವಸ್ಥೆಗೆ ಒಂದು ಬಹುದೊಡ್ಡ ಆಂದೋಲನವಾಗಿ ರೂಪುಗೊಂಡ ‘ಭಾರತ ಸ್ವಾತಂತ್ರ್ಯ ಚಳವಳಿ’ಗೆ ರಾಷ್ಟ್ರೀಯವಾದಿ ಗೀತೆಗಳನ್ನು ರಚಿಸಿ ತಂಡ ಕಟ್ಟಿ ಹಾಡಿದರು. ಭಾರತ ಸ್ವಾತಂತ್ರ್ಯ ಚಳವಳಿ ನಗರದ ವಿದ್ಯಾವಂತರ ಕೆಲವೇ ಕೆಲವರ ಧ್ವನಿಯಾಗಿದ್ದ ಸಂದರ್ಭದಲ್ಲಿ ಈ ಚಳವಳಿಯನ್ನು ಜನಮುಖಿಯಾಗಿಸಲು ಆ ಕಾಲಕ್ಕೆ ತೀವ್ರವಾಗಿ ಆಕರ್ಷಿಸಿದ್ದು ಲಾವಣಿ ಸಾಹಿತ್ಯ. ಲಾವಣಿ ಗೀಗಿ ಪ್ರಕ್ರಿಯೆ ತಂಡಗಳನ್ನು ಹುಟ್ಟು ಹಾಕಿದವು.
ಆ ಕಾಲದ ಸ್ವಾತಂತ್ರ್ಯ ಹೋರಾಟದ ನೇತಾರರಿಗೆ ಜೊತೆಯಾಗಿ ನಿಂತವರು ನಮ್ಮ ದೇಸೀ ಕಾವ್ಯ ಪ್ರಭುಗಳು 1930ನೇ ಇಸ್ವಿಯ ಜಾನೇವಾರಿ 29ನೇ ತಾರೀಖಿಗೆ ಹುಲಕುಂದಕ್ಕೆ ಬಂದ ವೆಂಕಟರೆಡ್ಡಿ ಹೂಲಿ, ವಾಮನರಾವ್ ಬಿದರಿ ಅವರು ಲಾವಣಿಕಾರರಿಗೆ ಗಾಂದಿಜಿ ವಿಚಾರಗಳನ್ನು ತಿಳಿಸಿ ವಿಧಾಯಕ ಕಾರ್ಯಕ್ರಮಗಳ ಪ್ರಚಾರ ಮಾಡುವಂತೆ ಹುರಿದುಂಬಿಸಿದರು. ಇದರ ಪರಿಣಾಮವಾಗಿ ಹುಲಕುಂದದ ಬಸಪ್ಪ ಸಂಗಪ್ಪ ಬೆಟಗೇರಿ (ಹುಲಕುಂದ ಬಿಮಕವಿ) ಹನುಮಪ್ಪ ಬಸಪ್ಪ ಮಿರ್ಜಿ, ಹುಲಕುಂದ ಪಟ್ಟದೇವರು (ಶಿವಲಿಂಗ ಕವಿ) ಸಿದ್ದರಾಯ, ಗಿರಿಮಲ್ಲ, ಸಂಗಯ್ಯ ಮುಂತಾದವರು ರಾಷ್ಟ್ರೀಯ ಪದಗಳನ್ನು ರಚಿಸಿದರು. ಅದೇ ಗ್ರಾಮದ ಗೀಗೀ ಮೇಳ ತಯಾರಾಯಿತು. ‘ಅಝಾದ ಹಿಂದ ಗೀಗೀ ಮೇಳ’ ಎಂಬ ಹೆಸರಿನ ಈ ಮೇಳವು ರಾಷ್ಟ್ರೀಯ ವಿಚಾರಗಳ ಪ್ರಚಾರಕ್ಕಾಗಿ ಕಂಕಣ ಬದ್ದವಾಯಿತು. ಬೆಳಗಾಂವಿ, ಧಾರವಾಡ, ವಿಜಾಪುರ, ಬಳ್ಳಾರಿ, ಕಾರವಾರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸಂಚರಿಸಿತು.
ಭಾರತೀಯ ಗ್ರಾಮೀಣ ಮನಸ್ಸುಗಳನ್ನು ಆಧುನಿಕತೆ ಆಕ್ರಮಿಸಿಕೊಂಡುದರ ಸಂಕೇತವಾಗಿ ಬದಲಾದ, ಬದಲಾಗುತ್ತಿರುವ ವಸ್ತು ಸಂಗತಿಗಳನ್ನು ಕಾವ್ಯದಲ್ಲಿ ಕಟ್ಟಿಕೊಡುವುದರ ಮೂಲಕ ಲಾವಣಿಕಾರರು ಸಮಕಾಲೀನತೆಗೆ ಸ್ಪಂದಿಸಿದ್ದು ಸ್ಪಷ್ಟವಾಗುತ್ತದೆ. ನಾಡಿನ ಪ್ರೀತಿಯನ್ನು ಅವರ ಕಾವ್ಯಶಕ್ತಿ ಜನಸಾಮಾನ್ಯರಲ್ಲಿ ಮಿಂಚು ಮೂಡಿಸಿತು. ಅಕ್ಷರಬಾರದ ಅನೇಕ ಜನಪದ ಸಮುದಾಯದ ಹಾಡುಗಾರಿಕೆಯಿಂದಾಗಿ ಅಂದು ಗಾಂಧೀಜಿಯವರ ಸಂದೇಶವನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಿದ ಕೀರ್ತಿ ನಮ್ಮ ಜನಪದರಿಗೆ ಸಲ್ಲುತ್ತದೆ.ಈ ಮೂಲಕ ಗಾಂಧೀಜಿ ಸ್ಥಳೀಯತೆಯ ಸದ್ಭಳಕೆಗೆ ಚಾಲನೆ ನೀಡಿದರು.

Monday 1 April 2013

ಲೇಖನ : ಹಲಸಂಗಿ ಗೆಳೆಯರು ಮತ್ತು ಜಾನಪದ -ಡಾ.ಪ್ರಕಾಶ ಗ.ಖಾಡೆ





  ಹಲಸಂಗಿ ಗೆಳೆಯರು ಮತ್ತು ಜಾನಪದ

                               -ಡಾ.ಪ್ರಕಾಶ ಗ.ಖಾಡೆ
                  
    «eÁ¥ÀÄgÀ f¯ÉèAiÀÄ ºÀ®¸ÀAV UÁæªÀÄzÀ°è PÀ¼ÉzÀ ±ÀvÀªÀiÁ£ÀzÀ DgÀA¨sÀzÀ°è ºÀÄnÖPÉÆAqÀ ‘ºÀ®¸ÀAV UɼÉAiÀÄgÀ UÀÄA¥ÀÄ’  PÀ£ÀßqÀ ¸Á»vÀå gÀZÀ£ÉUÉ ºÉƸÀ wgÀĪÀ£ÀÄß ¤ÃrvÀÄ.ºÀ®¸ÀAV UɼÉAiÀÄgÀ UÀÄA¦UÉ ªÀÄzsÀÄgÀZÉ£ÀßgÀÄ »jAiÀÄtÚ. F UÀÄA¦£À°è ¹A¦ °AUÀtÚ, ¥ÀmÉî zsÀƯÁ ¸ÁºÉç, PÁ¥À¸É gÉêÀ¥Àà, N¯ÉÃPÁgÀ ªÀiÁzÀtÚ, gÉêÀt¹zÀÝ¥Àà ªÀÄzÀ¨sÁ«, ZÉ£ÀߪÀÄ®èªÀé ¸ÀgÀ¸ÀA©, «eÁ¥ÀÅgÀzÀ §¸ÀtÚ CQÌ, ¥ÀzÀägÁd ºÀÄ£ÀUÀÄAzÀ, ZÀqÀZÀtzÀ UÀÄgÀÄ¥ÁzÀ¥Àà fÃgÀAPÀ®V, CUÀgÀSÉÃqÀzÀ CuÁÚgÁªÀ ¥Ánî ªÀÄÄAvÁzÀªÀgÀÄ ¸ÉÃjzÀÝgÀÄ. ºÀ®¸ÀAV UɼÉAiÀÄgÀÄ CAzÀÄ d£À¥ÀzÀ VÃvÉUÀ¼À ªÀĺÀvÀé¸Áj G¥À£Áå¸ÀUÀ¼À£ÀÄß, ºÁqÀÄUÁjPÉAiÀÄ£ÀÄß ¤ÃqÀĪÀ eÉÆvÉUÉ ¸ÀévÀB ¸ÀAUÀçºÀPÉÌ ¤AvÀgÀÄ. »ÃUÉ d£À¥ÀzÀgÀ ºÁqÀÄUÀ¼À£ÀÄß CªÀgÀ ¨Á¬ÄAzÀ PÉý §gÉzÀÄPÉÆAqÀÄ ¸ÀAUÀ绹 ¸ÀA¥Á¢¹ ¥ÀçPÀn¸ÀĪÁUÀ vÀªÀÄä PÁAiÀÄðPÉÌ ªÁå¥ÀPÀvÉ §gÀ®Ä ªÀÄvÀÄÛ CRAqÀ PÀ£ÁðlPÀ F PÀqÉUÉ ºÉÆgÀ¼À®Ä, vÀªÀÄä ¸ÀA¥Á¢vÀ PÀÈwAiÀÄ ªÀiË®å ºÉaѸÀ®Ä D PÁ®PÉÌ PÀ£ÀßqÀ d£ÀªÀiÁ£À¸À £ÉÃvÁgÀgɤ¹zÀÝ ©.JA.²çÃ, ªÀiÁ¹Û, ¨ÉÃAzÉç CªÀjAzÀ PÀÈwAiÀÄ PÁgÀå ªÀÄvÀÄÛ ªÀiË®å PÀÄjvÀÄ §gÀºÀUÀ¼À£ÀÄß §gɹzÀgÀÄ. ºÀ®¸ÀAV UɼÉAiÀÄgÀ F PÁgÀåzÀ°è ªÉÆzÀ® ¨ÁjUÉ PÀÈwAiÀÄ PÀÄjvÀÄ §gÉzÀ ©.JA.²çà ªÀÄvÀÄÛ ¨ÉÃAzÉçAiÀĪÀgÀ ªÀÄÄA¢£À PÁªÀåzsÁnAiÉÄÃ, PÁªÁå¯ÉÆÃZÀ£ÉUÀ¼Éà ¨ÉÃgÉAiÀiÁzÀªÀÅ. §jà ¸ÀA¸ÀÌøvÀ, EAVèµï ¥Àç¨sÁªÀ PÀÄjvÀÄ aAw¸ÀÄwÛzÀÝ F «zÁéA¸ÀgÀÄ ºÀ®¸ÀAV UɼÉAiÀÄgÀ eÁ£À¥ÀzÀ PÁgÀå¢AzÀ ¸ÀÆáwðUÉÆAqÀÄ PÀ£ÀßqÀ £ÀªÉÇÃAiÀÄzÀ PÁªÀåzÀ eÁ£À¥ÀzÀzÀ ºÉ¨ÁâV®Ä vÉgɬÄvÀÄ JAzÀÄ ¸ÁjzÀgÀÄ. PÀ£ÀßqÀzÀ w¼ÀĪÀ½PÉ PÀ£ÀßqÀzÀ°èAiÉÄà ºÀÄnÖ§gÀ¨ÉÃPÀÄ, PÀ£ÀßqÀ ¨sÁµÉAiÉÄà aAw¸À®Ä, ¨sÁ«¸À®Ä, w½AiÀÄ®Ä PÀ°AiÀĨÉÃPÀÄ. CzÀPÁÌV CªÀPÁ±À ªÀiÁrPÉÆqÀ¨ÉÃPÀÄ JAzÀÄ ºÉüÀĪÀ ªÀÄÆ®PÀ zÉùà ªÀiÁwUÉ ªÀÄ£ÀßuÉ, ¥ÁçzsÁ£Àå ¤ÃqÀĪÀ ¸ÀAzÀ¨sÀð MzÀV§A¢vÀÄ. E°è qÁ.¹.PÉ.£ÁªÀ®V CªÀgÀ ªÀiÁvÀÄUÀ½AzÀ F ¸ÀAUÀwAiÀÄ£ÀÄß E£ÀßµÀÄÖ ¸ÀàµÀÖ¥Àr¸À®Ä ¸ÁzsÀå:

    ‘‘PÀ£ÀßqÀ £ÀªÉÇÃzÀAiÀÄ ¸ÀAzÀ¨sÀðzÀ°è eÁ£À¥ÀzÀ ¸ÀAUÀçºÀ PÀÄjvÁzÀ ¤dªÁzÀ D¸ÀQÛ PÀ£ÀßrUÀgÀ°è ªÀÄÆrvÀÄ. ¥Á±ÁÑvÀå ¸Á»wåPÀ UÁ½AiÀÄ£ÀÄß vÀ¯ÉAiÀÄ°è vÀÄA©PÉÆAqÀ £ÀªÉÇÃzÀAiÀÄzÀ C£ÉÃPÀ PÀ£ÀßqÀ PÀ«UÀ¼ÀÄ vÀªÀÄä PÁªÀåzÀ ¸ÉÆUÀ¸ÀÄ , ¸ËAzÀAiÀÄð, ¯ÁªÀtÂUÀ½UÉ MnÖ£À°è PÁªÀå ±ÉÊ°AiÀÄ §UÉUÉ d£À¥ÀzÀ ¸Á»vÀåªÀ£ÀÄß C¤ªÁgÀåªÁV D±Àç¬Ä¸À¯Éà ¨ÉÃPÁ¬ÄvÀÄ. CAxÀ PÁªÀåzÀ ¸ÉÆUÀ¸ÀÄ, ¸ËAzÀgÀå UÀÄt, d£À¥ÀzÀ ¸Á»vÀåQÌzÉ. JA§ÄzÀ£ÀÄß ªÀÄ£ÀUÀAqÀ £ÀªÉÇÃzÀAiÀÄ PÀ«UÀ¼ÀÄ vÀªÀÄä PÁªÀå PÀȶAiÀÄ°è eÁ£À¥ÀzÀzÀ ««zsÀ ¥ÀçPÁgÀUÀ¼À vÀAvÀç, ¨sÁµÉ, bsÀAzÀ¸ÀÄì EvÁå¢UÀ¼À£ÀÄß zÀÄr¹PÉƼÀîvÉÆqÀVzÀgÀÄ. EzÀgÀ ¥ÀjuÁªÀĪÁV PÀ£ÀßqÀ eÁ£À¥ÀzÀ ¸ÀAUÀçºÀ CzsÀåAiÀÄ£ÀUÀ¼ÀÄ ¥ÁçgÀA¨sÀªÁzÀªÀÅ. ’’
       ºÀ®¸ÀAV UɼÉAiÀÄgÀ UÀgÀwAiÀÄ ºÁqÀÄ ºÉÆgÀ§gÀĪÀ ªÉÆzÀ®Ä ªÀÄvÀÄÛ F UɼÉAiÀÄgÀÄ eÁ£À¥ÀzÀzÀ §UÉUÉ GAlĪÀiÁqÀÄwÛzÀÝ eÁUÀÈwAiÀÄ°è ¥Á¯ÉÆÎAqÀ ¨ÉÃAzÉçAiÀĪÀgÀ PÁªÀåzsÉÆÃgÀuÉAiÀÄ£ÀÄß E°è UÀªÀĤ¸À¨ÉÃPÀÄ. ‘£ÀªÀÄUÉ ¨ÉÃPÁzÀ PÁªÀå’ (1923) PÀÄjvÀÄ ZÀað¹zÀ ¨ÉÃAzÉçAiÀĪÀgÀÄ ªÀÄÄAzÉ ¸ÀA¥ÀÇtðªÁV eÁ£À¥À¢ÃAiÀÄvÉUÉ MvÀÄÛ ¤ÃrgÀĪÀÅzÀÄ ¸ÀàµÀÖªÁUÀÄvÀÛzÉ.
¨ÉÃAzÉçAiÀĪÀgÀÄ CAzÀÄ £ÀªÀÄUÉ ¨ÉÃPÁzÀ PÁªÀå PÀÄjvÀÄ ¸Á»vÀå ¸ÀªÉÄäüÀ£ÀzÀ ¨sÁµÀtzÀ°è ºÉýzÀÄÝ:
1. £ÀªÀÄUÉ ¨ÉÃPÁzÀªÀgÀÄ CµÁÖzÀ±À ªÀtð£ÀzÀ, ZÀPÉÆÃgÀ ZÁvÀPÀUÀ¼À ¸ÀªÀÄAiÀÄzÀ PÀ«UÀ¼À®è. ¸ÀȶÖAiÀÄ ¥ÀÇeÁjUÀ¼ÁzÀ, «ZÁgÀªÀÄÆqsÀ «PÁgÀUÀ¼À£ÀÄß vÁ¼À ®AiÀÄPÉÌ ºÁqÀĪÀ PÀ«UÀ¼À®è. £ÀªÀÄUÉ ¨ÉÃPÁzÀªÀgÀÄ  IĶUÀ¼ÀÄ. ªÀÄAvÀçzÀçµÁÖgÀgÁzÀ IĶUÀ¼ÀÄ, ªÉÃzÀzÀ PÀ«UÀ¼ÀÄ.
2.¨sÁªÀAiÉÆÃUÀ §®¢AzÀ C¥ÀgÉÆÃPÀë eÕÁ£ÀªÀ£ÀÆß, ±ÉÆÃPÀ ¤ªÀÈwÛAiÀÄ£ÀÄß ¤gÀAPÀıÀ ªÀÈwÛAiÀÄ£ÀÄß ¥ÀqÉzÀ ¥Áç¸Á¢vÀ PÀ«UÀ¼ÀÄ ¨ÉÃPÀÄ.
3.ªÀÄvÀUÀ¼À ¨ÉðAiÀÄ£ÀÄß zÁn J®ègÉƼÀÄ vÁ¤¥Àà vÀ£ÉÆß¼ÀUÉ®ègÀ£ÀÄ zsÀj¹ºÀ MAzÀÄ ¸À£ÁvÀ£À zsÀªÀÄðzÀ C£ÀĨsÁªÀ ¸ÀÆàwð¬ÄAzÀ  KPÀA ¸À¢é¥Áç §ºÀÄzsÁ ªÀzÀAw ¸ÀªÀð avÉÆÓöåÃw zÉêÉÃwAiÀÄB ¥À±Àåw ¸À ¥À±Àåw’ ‘Nature is a symbolªÉÆzÀ¯ÁzÀ AiÉÆÃV ¥ÀçvÀåPÀëd ¥ÀçwÃwAiÀÄ ¸ÀªÀÄAiÀÄUÀ½AzÀ MqÀUÀÆrzÀ UÁqsÀ, G£ÀßvÀ PÁªÀå¨ÉÃPÀÄ.
4.CAzÀ ZÉAzÀzÀ ¤ÃlÄUÁjPÉAiÀÄ PÁªÀåªÀÅ £ÀªÀÄUÀµÀÄÖ ¨ÉÃPÁV®è. fëvÀzÀ ºÀÄgÀļÀÄ wgÀļÀ£ÀÄß MqÀ£ÀÄrzÀÄ vÉÆÃj¹ ¸ÀA¸ÁgÀ ¸ÁgÉÆÃzÀAiÀĪÁUÀĪÀ PÁªÀåªÀÅ £ÀªÀÄUÉ ¨ÉÃPÁVzÀÝgÀÆ, £ÀgÀ£ÉƼÀV£À £ÁgÁAiÀÄt£À CªÀvÁgÀzÀ ¨É¯ÉUÀ¼À£ÀÆß, ªÀiÁ£ÀªÀ£ÉƼÀV£À ªÀÄ£ÀÄ«£À GzÁÞgÀzÀ £É¯ÉUÀ¼À£ÀÆß, ¥Àçw¨sÁZÀPÀëÄ«£À eÉÆåÃwAiÀÄ ¨É¼ÀQ£À°è dUÀwÛ£À gÀ¹PÀ zÀȶÖUÉ vÉÆÃj¸ÀĪÀ, ±ÀçªÀtªÀiÁvÀç¢AzÀ ¸ÀºÀÈzÀAiÀÄgÀ ºÀÈzÀAiÀÄzÀ°è Q«¬ÄA¢ÃAn¸ÀĪÀ PÁªÀå £ÀªÀÄUÉ ¨ÉÃPÁzÀ PÁªÀå.
5.CgÀ«AzÀgÀÄ Future PoetryAiÀÄ°è ºÉýzÀAvÉ ªÀ¸ÀÄÛªÀ¸ÀÄÛ«£À CAvÀgÀAUÀzÀ ªÉÆUÀÄÎUÀ¼À£ÀßgÀ½¸ÀĪÀ ¥ÀçPÀÈwAiÀÄ CAvÀUÀðvÀªÁzÀ ZÉÊvÀ£ÀåªÀ£ÀÄß ªÀÄÆwðªÀÄvÁÛV vÉÆÃj¸ÀĪÀ CPÀëgÁvÀä£À, CAvÀgÁvÀä£À, C«¢vÀ gÀ¸ÀUÀ¼À C£ÀAvÀ °Ã¯Á£ÁlåzÀ ¥ÉçÃPÀëPÀgÀ£ÁßV £ÀªÀÄä£ÀÄß ªÀiÁqÀĪÀ, £À±ÀégÀzÉƼÀV£À F±ÀégÀ£À£ÀÄß CAvÀ±ÀÑPÀëÄ«UÉ ¥ÀçvÀåQëÃPÀj¸ÀĪÀ PÁªÀå £ÀªÀÄUÉ ¨ÉÃPÁzÀ PÁªÀå.
6. ²±ÀÄ£Á¼À ±ÀjÃ¥sÀ¸ÁºÉçgÀ DvÀäªÉÃzsÀPÀ ªÁtÂ, ºÀ½î¥À½îAiÀÄ Nt NtÂUÀ¼ÉƼÀV£À ªÀiÁvÀÄ PÀxÉUÀ¼À£ÀÄß gÀÆ¥ÀPÀzÀ CªÀAiÀĪÀUÀ¼À£ÁßV ªÀiÁr, DvÀäzÀ gÀAUÀÄgÀÆ¥À£ÀÄß ¤gÀƦ¸ÀĪÀ  AiÉÆÃUÀPÀıÀ®ªÁUÀ¨ÉÃPÀÄ.
»ÃUÉ ¨ÉÃAzÉçAiÀĪÀgÀÄ DgÀA¨sÀ PÁ®zÀ°è ±É°è, QÃmïì dAiÀÄzÉêÀ ªÀÄvÀÄÛ CgÀ«AzÀgÀ ¥Àç¨sÁªÀPÉÌ M¼ÀUÁV PÀ£ÀßqÀPÁªÀå MqÀªÀÄÆqÀ¨ÉÃPÁzÀ ¸ÀAzÀ¨sÀðUÀ¼À£ÀÄß PÀnÖPÉÆlÖgÀÄ. ªÀÄÄAzÉ ºÀ®¸ÀAV UɼÉAiÀÄgÀ ¸ÀA¥ÀPÀð, ¸ÁzsÀ£ÀPÉÃjAiÀÄ zÀlÖ UÁç«ÄÃt ¸ÉÆUÀqÀÄ ºÀ½îAiÀÄ ºÁqÀÄ, zÁ¸ÀgÀ ¥ÀzÀ, ±ÀjÃ¥sÀgÀ UÁçªÀÄå, eÁ£À¥ÀzÀ zsÁnUÉ ªÀÄ£À¸ÉÆÃvÀÄ eÁ£À¥ÀzÀªÉà ¤dªÁzÀ PÁªÀå ,£ÀªÀÄä PÀ«vÉAiÀÄÄ eÁ£À¥ÀzÀzÀ ªÉÄÊzÀÄA©PÉƼÀî¨ÉÃPÁzÀ CUÀvÀåªÀ£ÀÄß ºÀ®¸ÀAV UɼÉAiÀÄgÀ UÀgÀwAiÀÄ ºÁqÀÄ¥ÀjZÀAiÀÄzÀ°è ¥ÀçPÀl¥Àr¹zÀgÀÄ. CªÀgÀ §zÀ¯ÁzÀ PÁªÀå ¸ÀAzÀ¨sÀðªÀ£ÀÄß »ÃUÉ UÀÄgÀÄw¸À®Ä ¸ÁzsÀå. £ÀªÀÄä EA¢£À PÀ£ÀßqÀ ¸Á»vÀåPÉÌ D ¸ÀA¸ÁÌgÀªÀÅ CªÀ±Àå«zÉ. ¸ÀA¸ÀÌøvÀ, EAVèµï, ºÀ¼ÀUÀ£ÀßqÀUÀ¼À ¥Àçw©A§ªÀ£ÀÄß vÀ¼ÉzÀ ¸Á»vÀåQÌAvÀ®Æ CZÀÑUÀ£ÀßqÀzÀ CZÉÆÑwÛzÀ ¸Á»vÀåzÀ CUÀvÀåªÀÅ C¶ÖµÉÖAzÀÄ ºÉüÀ¨ÁgÀzÀÄ. PÀlÄÖ¼Àî ªÉÄÊ, ºÀÄlÄÖ ¸À«AiÀÄļÀî £ÀÄr, w½AiÀiÁzÀ §UÉ EªÉ®èªÀÇ ¨ÉÃPÀÄ FV£À PÀªÀ£ÀUÀ¼À°è. fêÀ£ÀªÉà zÉêÀvÉAiÀiÁzÀ wç¥À¢ bsÀAzÀzÀ°è ºÉÆgÀºÉÆ«ÄäzÀ UÀgÀwAiÀÄ ºÁr£À IĶUÀ¼ÀÄ ºÉtÄÚ ªÀÄPÀ̼ÀÄ CªÀgÀzÉà ¤dªÁzÀ PÁªÀå G½zÀÄzÀÄ PÁªÀåzÀ bsÁAiÉÄ JAzÀÄ ¸ÁgÀĪÀ ªÀÄÆ®PÀ PÀ£ÀßqÀ £ÀªÉÇÃzÀAiÀÄPÉÌ eÁ£À¥ÀzÀzÀ ²çÃPÁgÀ ºÁQzÀgÀÄ. eÉÆvÉUÉ CªÀgÀÆ eÁ£À¥ÀzÀ ¸Á»vÀå ¥Àç¸ÁgÀ, ¥ÀçZÁgÀPÁÌV D PÁ®zÀ°è ªÀÄzsÀÄgÀZÉ£Àß, ©.JA.²çÃ, PÀĪÉA¥ÀÅ ªÉÆzÀ¯ÁzÀªÀgÉÆA¢UÉ £ÁqÀ£ÀÄß ¸ÀÄwÛ eÁUÀÈw ªÀÄÆr¹ PÀ£ÀßqÀ PÁªÀåzÀ eÁ£À¥À¢ÃAiÀÄvÉUÉ ºÉƸÀ ¸ÁzsÀåvÉUÀ¼À£ÀÄß vÉgÉzÀÄvÉÆÃjzÀgÀÄ.
zÀ.gÁ.¨ÉÃAzÉçAiÀĪÀgÀÄ vÀªÀÄä d£À¥ÀzÀ zsÁnAiÀÄ PÀ«vÉUÀ¼À£ÀÄß HgÀÆgÀ°è ºÁr ºÉýzÁUÀ MAzÀÄ §UÉAiÀÄ eÁUÀÈw GAmÁ¬ÄvÀÄ. 1930gÀ°è PÀĪÀiÁgÀªÁå¸À GvÀìªÀzÀ°è GvÀÛgÀPÀĪÀiÁgÀ JA§ ¥Àç§AzsÀªÀ£ÀÄß NzÀĪÀÅzÀPÁÌV ¨ÉÃAzÉçAiÀĪÀgÀÄ ªÉÄʸÀÆjUÉ ºÉÆÃVzÀÝgÀÄ. DUÀ ªÉÄʸÀÆgÀÄ ¸Á»vÀå ¸ÀªÉÄäüÀ£ÀzÀ ¯ÉÃRPÀgÀ UÉÆö×UÉ C£Ë¥ÀZÁjPÀ CzsÀåPÀëgÁUÀĪÀ WÀl£É WÀn¹vÀÄ. F ¸À¨sÉAiÀÄ°è PÀĪÉA¥ÀÅ CªÀgÀÄ vÁ£Áf ¯ÁªÀtÂAiÀÄ£ÀÄß N¢zÀgÀÄ. ºÀ¼ÉAiÀÄ PÁªÀå ¸ÀA¥ÀçzÁAiÀÄzÀªÀgÀÆ vÀªÀÄä PÀªÀ£À N¢zÀÝgÀÄ. C£ÀAvÀgÀ ªÀiÁgÀ£ÉAiÀÄ ªÀµÀð ¨ÉÃAzÉçAiÀĪÀgÀÄ ªÀiÁ¹ÛAiÀĪÀgÉÆqÀ£É ªÉÄʸÀÆgÀÄ, ¨ÉAUÀ¼ÀÆgÀÄ ªÀÄvÀÄÛ ªÉÄʸÀÆj£À ¨ÉÃgÉ ¨ÉÃgÉ zÉÆqÀØ HgÀÄUÀ¼À°è eÁ£À¥ÀzÀ ¸Á»vÀå «µÀAiÀĪÁV ¨sÁµÀt ªÀiÁrzÀÝgÀÄ. CzÀ®èzÉ ºÀQÌ ºÁgÀÄwzÉ £ÉÆÃr¢gÁ, PÉÆÃV¯É, ZÀ½AiÀiÁPÉ, vÀÄwÛ£À aî, gÀ¹PÀ ¥ÉüÉÆÃ, PÀ£À¹£ÉƼÀUÉÆAzÀÄ PÀ£À¸ÀÄ, PÀjªÀÄj£Á¬Ä, gÁUÀgÀw, aAvÉ ªÉÆzÀ¯ÁzÀ  ¥ÀzÀåUÀ¼À ªÁZÀ£À ªÀiÁr vÉÆÃj¹zÀÝgÀÄ. F ¥ÀzÀåUÀ¼À£ÀÄß EA¢UÀÆ d£ÀgÀÄ ¨ÉÃAzÉçAiÀĪÀgÀ PÁªÀåzÀ »jªÉÄAiÀÄ£ÀÄß ºÉüÀ®Ä §¼À¸ÀÄwÛzÁÝgÉ. EzÉà jÃw DUÀ ªÀiÁrzÀ ¨sÁµÀtUÀ¼À ªÀÄÆ®PÀªÉà ¨ÉÃAzÉçAiÀĪÀgÀ PÁªÀå eÁ£À¥ÀzÀ PÁªÀå JAzÀÆ, CªÀgÀÄ ºÁrzÀgÉà w½AiÀÄĪÀ PÁªÀå JAzÀÆ ªÀiË®åªÀiÁ¥À£À ªÀiÁrzÀgÀÄ. »ÃUÉ eÁ£À¥ÀzÀzÀ ¥ÀçZÁgÀ, ¥Àç¸ÁgÀ, ¸ÀAUÀçºÀ, ¸ÀA¥ÁzÀ£É PÁgÀå¢AzÀ §ºÀÄPÁ®¢AzÀ «¸Àäß÷ÈwUÉ M¼À¥ÀlÖ zÉòà PÁªÀå ¥ÀgÀA¥ÀgÉUÉ §ºÀÄzÉÆqÀØ ¥ÉÇçÃvÁìºÀ ªÀÄ£ÀßuÉ zÉÆgÉvÀÄ £ÁqÀÄ UÀÄgÀÄw¸ÀĪÀAvÁ¬ÄvÀÄ. £ÀªÉÇÃzÀAiÀÄ PÀ«UÀ½UÉ eÁ£À¥ÀzÀªÉà ªÀÄÆ® D±ÀçAiÀĪÁ¬ÄvÀÄ. gÁeÁ±ÀçAiÀÄzÀ PÀlÄÖPÀlÖ¼ÉAiÀÄ §AzsÀ ¸Àr®UÉÆAqÀÄ §AiÀÄ®Ä ¸Á»vÀåzÀ D±ÀAiÀÄUÀ¼ÀÄ wêÀçªÁV ¸É¼ÉAiÀÄĪÀÅzÀgÉÆA¢UÉ AiÀiÁgÀÆ eÁ£À¥ÀzÀ¢AzÀ ºÉÆgÀUÀĽAiÀÄ®Ä ¸ÁzsÀåªÁUÀ°®è. PÀ£ÀßqÀ eÁ£À¥ÀzÀPÉÌ ªÉÆzÀ® £ÉÃV®Ä ºÀÆrzÀ ºÀ®¸ÀAV UɼÉAiÀÄgÀÄ ªÀiÁrzÀ PÁgÀå ¸ÁªÀðwçPÀªÁV UÀªÀÄ£À¸É¼É¬ÄvÀÄ. eÁ£À¥ÀzÀ UÁgÀÄrUÀ J¤¹zÀ zÀ.gÁ.¨ÉÃAzÉçAiÀĪÀgÀ F ªÀiÁvÀÄUÀ¼À£ÀÄß UÀªÀĤ¸ÉÆÃt.
£À£ÀUÉ w½zÀ ªÀÄnÖUÉ ZÀ£ÀߪÀÄ®è¥Àà£ÀªÀgÀÄ (ªÀÄzsÀÄgÀZÉ£Àß) «eÁ¥ÀÅgÀ ¸Á»vÀå ¸ÀªÉÄäüÀ£À PÁ®PÉÌ ºÀ½îAiÀÄ ¸Á»vÀåzÀ «µÀAiÀĪÁV ªÀiÁvÀ£ÁrzÀÄzÉà ªÉÆzÀ®Ä. CªÀgÀ ¥ÀÅlÖ ¤§AzsÀªÀÅ ªÀÄÄAzÉ ¸Á»vÀå ¥ÀjµÀvï ¥ÀwçPÉAiÀÄ°è ¥ÀçPÀlªÁ¬ÄvÀÄ. ºÉƸÀ¥ÉÃmÉAiÀÄ ²çà ºÀtĪÀÄAvÀUËqÀgÀÄ ªÉÆzÀ¯ÁzÀªÀgÀÄ ¯ÁªÀtÂUÀ¼À ¸ÀAzÀ¨sÀðªÀ£ÀÄß DUÁUÉÎ JwÛ ªÀiÁvÀ£ÁrzÀgÀÆ ¯ÁªÀt ¸ÁAUÀvÀåzÀ «µÀAiÀĪÁV ²çêÀiÁ£ï ªÀiÁ¹ÛAiÀĪÀgÀÄ ¥ÀjµÀvï ¥ÀwçPÉAiÀÄ°è §gÉzÀ ¸ÉÆUÀ¸ÁzÀ ¯ÉÃR£ÀªÉà ªÀĺÀvÀézÀ §gÀºÀ. PÀ®§ÄVð, ¨É¼ÀUÁ« ªÀÄvÀÄÛ ªÉÄʸÀÆgÀÄ F ªÀÄÆgÀÄ ¸ÀªÉÄäüÀ£ÀUÀ¼À°èAiÀÄÆ ¥ÀçªÀÄÄRªÁV ²çÃPÀAoÀAiÀÄå£ÀªÀgÀ ¥ÉÇçÃvÁìºÀ¢AzÀ®Æ, ¦çÃwUÁVAiÀÄÆ d£À¥ÀzÀ ¸Á»vÀå «ZÁgÀªÀ£ÀÄß PÀÄjvÀÄ ¸ÀªÉÄäüÀ£ÀzÀ ¸À¨sÁ¸ÀzÀgÀ ¸ÀªÀÄPÀëªÀÄzÀ°è ZÀað¸ÀĪÀ ¸ÀA¢s £À£ÀUÉ zÉÆgɬÄvÀÄ. ¨É¼ÀUÁ«AiÀÄ ¸ÀªÉÄäüÀ£ÀzÀ°è ²çà ªÀiÁ¹Û CªÀgÀÄ F «µÀAiÀĪÀ£ÀÄß PÀÄjvÀÄ ªÀiÁvÀ£ÁrzÀgÀÄ. ªÀÄÄAzÉ dAiÀÄ PÀ£ÁðlPÀ¥ÀwçPÉAiÀĪÀgÀÄ d£À¥ÀzÀ ¸Á»vÀåªÀ£ÀÄß ¸ÀAUÀ绸ÀĪÀ AiÀÄvÀßUÀ½UÉ ¥ÉÇõÀuÉAiÀĤßÃAiÀÄ®Ä D ªÀiÁ¸À¥ÀwçPÉAiÀÄ°è EA¢UÀÆ ¥ÀçvÉåÃPÀ ¥ÀÅlUÀ¼À£ÀÄß PÉÆqÀÄvÀÛ §A¢gÀĪÀgÀÄ. F ªÀÄzsÀåzÀ°èUÉ ¥Àç¯ÁízÀ £ÀgÉÃUÀ®è CªÀgÀÄ PÀ£ÁðlPÀ PÁ¯ÉÃdÄ ¥ÀwçPÉAiÀÄ°è ªÁ¸ÀÛªÀ ¸Á»vÀå JA§ ¯ÉÃR£ÀªÀ£ÀÆß, ¨ÉlUÉÃjAiÀĪÀgÀÄ ¥ÀjµÀvï ¥ÀwçPÉAiÀÄ°è ºÀ½îUÀgÀ ºÁqÀÄUÀ¼ÀÄ JA§ ¸ÉÆÃzÁºÀgÀtªÁzÀ ¤±ÁAvÀ ªÀÄ£ÉÆúÀgÀªÁzÀ ¤§AzsÀªÀ£ÀÆß ªÀÄÄA§¬ÄAiÀÄ ¥ÀçZÉÆÃzÀPÀ ªÀiÁ¸À¥ÀwçPÉAiÀÄ ¸ÀA¥ÁzÀPÀgÀÄ »j §gÀºÀªÉÇAzÀ£ÀÄß §gÉzÀÄ d£À¥ÀzÀ ¸Á»vÀå ¸ÀAUÀçºÀzÀ PÁgÀåªÀ£ÀÆß JwÛ »r¢zÁÝgÉ. ¥Àç§ÄzÀÞ PÀ£ÁðlPÀ, gÀAUÀ¨sÀÆ«Ä, PÀxÁAd° ªÉÆzÀ¯ÁzÀ ¥ÀwçPÉUÀ¼À°èAiÀÄÆ d£À¥ÀzÀ ¸Á»vÀå vÀ¯ÉzÉÆÃgÀzÉ E®è. F ¥ÀçAiÀÄvÀßUÀ¼À ¥ÀçxÀªÀÄ ¥sÀ®ªÉAzÀÄ ZÀ£ÀߪÀÄ®è¥Àà£ÀªÀgÀÆ CªÀgÀ UɼÉAiÀÄgÀÆ ¥ÀçªÀÄÄRvÀB ¸ÀAUÀ绹zÀ, ¸ÀA¥Á¢¹zÀ d£À¥ÀzÀ UÁxÁ ¸ÀA»vÉ’ (UÀgÀwAiÀÄ ºÁqÀÄ)AiÀÄ£ÀÆß PÀ£ÀßrUÀjUÉ PÉÆqÀĪÀ ¸ÀÄAiÉÆÃUÀ GAmÁVzÉ.
   D PÁ®PÉÌ eÁ£À¥ÀzÀªÀÅ GAlĪÀiÁrzÀ DPÀµÀðuÁ £É¯ÉAiÀÄ£ÀÄß ¨ÉÃAzÉçAiÀĪÀgÀÄ UÀÄgÀÄw¸ÀÄvÀÛ MlÄÖ PÀ£ÀßqÀzÀ ¸ÀAzÀ¨sÀðzÀ°è ªÀÄÄRåzsÁgÉAiÀiÁV ¥ÀçªÀ»¹zÀÝ£ÀÄß ¸ÀàµÀÖ¥Àr¹zÁÝgÉ. F PÁgÀåzÀ°è vÀªÀÄä£ÀÄß vÀÄA¨Á eÁUÀÈw¬ÄAzÀ vÉÆqÀV¹PÉÆAqÀ ©.JA.²çà CªÀgÀÄ UÀgÀwAiÀÄ ºÁqÀÄ ¸ÀAPÀ®£ÀzÀ ¥Àç¸ÁÛªÀ£ÉAiÀÄ°è CªÀgÀ eÁ£À¥ÀzÀ zsÉÆÃgÀuÉAiÀÄ£ÀÄß CjAiÀħºÀÄzÀÄ. GzÀÝPÀÆÌ PÀ£ÀßqÀ ºÀ®ªÀÅ ¥Àç¨sÁªÀUÀ½UÉ M¼ÀUÁV F eÁ£À¥À¢ÃAiÀÄ CA±ÀUÀ½UÉ M¼ÀUÀÄ ªÀiÁrPÉƼÀÄîwÛgÀĪÀ ¸ÀAzÀ¨sÀðªÀ£ÀÄß UËgÀªÀ¥ÀÇtðªÁV ¥ÀçZÀÄgÀ¥Àr¸ÀÄvÁÛgÉ. d£À¥ÀzÀ ¸Á»vÀåªÀ£ÀÄß ªÀiÁvÀç G¼Àî MAzÀÄ d£ÀPÉÌ D ¸Á»vÀåzÀ ªÀÄlÖªÀ£ÀÄß «ÄÃj GvÀÛªÀÄ PÁªÀåUÀ½AzÀ ±ÉÆésvÀªÁzÀ ¸Á»vÀåªÀ£ÀÄß¼Àî d£ÀgÀ ¸ÀA¥ÀPÀð GAmÁUÀĪÀ ¸ÀAzÀ¨sÀð §AzÁUɯÁè D C£Àå ¸Á»vÀåzÀ ¸ËAzÀAiÀÄðPÀÆÌ, UÁA©sÃgÀåPÀÆÌ ªÀÄgÀļÁV gÁfPÀ, ¸ÁªÀĬÄPÀ PÁgÀtUÀ½AzÀ D ¸Á»vÀåPÀÆÌ, ¸Á»vÀå ±Á¸ÀÛçPÀÆÌ ±ÀgÀtÄ ºÉÆÃV, CzÀgÀ PÁAwAiÀÄ£ÀÄß §®ªÀ£ÀÄß ¹éÃPÀj¸ÀĪÀÅzÀPÉÌ ¥ÀçAiÀÄw߸ÀĪÀÅzÀÄ ¸Áé¨sÁ«PÀªÁVzÉ. »AzÉ PÀ£ÀßqÀ ¸ÀA¸ÀÌøvÀ ¸ÀªÉÄäüÀ£ÀzÀ°è »ÃUÉ £ÀqɬÄvÀÄ. FUÀ PÀ£ÀßqÀ ¸ÀA¸ÀÌøwAiÀÄ ¸ÀºÀZÀAiÀÄðzÀ°è »ÃUÉ £ÀqÉAiÀÄÄvÁÛ EzÉ. EzÀÄ vÀ¥ÉàAzÁUÀ°, PɼÀV£À ªÀÄlÖzÀ ¸Á»vÀåªÉà GvÀÌøµÀÖªÉAzÁUÀ° ºÉüÀ¨ÉÃPÉAzÀ®è. DzÀgÉ vÀ£ÀßzÀ£ÀÄß zÉñÀåªÉAzÀÄ ¢sPÀÌj¹, C£Àå ªÀiÁUÀðzÀ°èAiÉÄà ¸ÉéÃZÉáAiÀiÁV ªÀÄ¢¹ wgÀÄUÀÄvÁÛ EzÀÄÝ PÀqÉUÉ £À«Ã£ÀvÉAiÀÄ PÀÄvÀƺÀ®ªÀÇ ¸ÁªÀÄxÀåðªÀÇ PÁ®PÀçªÀÄzÀ°è ºÀ¼À¹, AiÀiÁªÀ ¤dªÁzÀ ¸ÀvÀÛ÷éªÀÇ E®èzÉ, d£ÀjAzÀ zÀÆgÀªÁV ¸Á»vÀåªÀÅ ¤¸ÁìgÀªÁUÀĪÀÅzÀÄ, vÉÃeÉÆûãÀªÁUÀĪÀÅzÀÄ. DUÀ ªÀÄvÉÛ ºÀ¼ÉAiÀÄ ¸Á»vÀåzÀ ¥ÀÅ£ÀgÀÄvÁÜ£ÀªÁUÀĪÀÅzÀÄ. ªÀÄvÉÛ ¸ÀºÀÈzÀAiÀÄgÀÄ vÀªÀgÀÄ£Ár£À, vÁ¬Ä ºÁr£À ºÁ®£ÀÄß PÀÄrzÀÄ ¸ÀfêÀgÁUÀ¨ÉÃPÉAzÀÄ »AwgÀÄUÀĪÀgÀÄ. d£ÀgÉÆqÀ£É d£ÀªÁUÀĪÀgÀÄ. D ¨sÁµÁ, D bsÀAzÀ¸ÀÄì, D fêÀ ªÀÄvÉÛ ºÉƼÀ¥ÀÅUÀÆr ºÉªÉÄäUÉÃgÀĪÀÅzÀÄ... PÀ£ÀßqÀzÀ°è EAxÀ PÁ® MzÀVgÀĪÁUÀ PÀ£ÀßqÀ PÀ«vÉ vÀ£Àß C¼ÀvÉAiÀÄ£Éßà C®è, D¼ÀªÀ£ÀÆß PÀÆqÀ PÀAqÀÄPÉƼÀÄîwÛgÀĪÁUÀ, ¸ÀA¸ÀÌøvÀ-EAVèµï ¸Á»vÀåUÀ¼À, EvÀgÀ ¸Á»vÀåUÀ¼À, ¸ÀjAiÀiÁzÀ ¸ÀA¸ÁÌgÀzÀ eÉÆvÉUÉ PÀ£ÀßqÀzÀ ¥ËçqsÀ¸Á»vÀåzÀ ªÁå¸ÀAUÀzÀ eÉÆvÉUÉ, PÀ£ÀßqÀzÀ ªÀÄvÀÄÛ EvÀgÀ ¸Á»vÀåzÀ d£À¥ÀzÀ ¸Á»vÀåªÀ£ÀÄß ¥ÀgÁªÀIJð¸ÀĪÀÅzÀÄ CvÁåªÀ±ÀåPÀªÁzÀ PÀvÀðªÀå JAzÀgÀÄ ©.JA.²çà CªÀgÀÄ.
©.JA.²çà CªÀgÀÄ GvÀÛgÀ PÀ£ÁðlPÀPÉÌ §AzÁUÀ¯É®è CªÀgÀÄ E°è£À eÁ£À¥ÀzÀzÀ §UÉV£À D¸ÀQÛzÁAiÀÄPÀ PÉ®¸ÀUÀ¼À£ÀÄß UÀªÀĤ¹, CzÀgÀ ±ÉçÃAiÀĹìUÁV vÀªÀÄä aAvÀ£ÉAiÀÄ£ÀÄß eÉÆvÉ ¸ÉÃj¸À¨ÉÃPÁ¬ÄvÀÄ. 1929gÀ°è ¸Á»vÀå ¸ÀªÉÄäüÀ£À ¨É¼ÀUÁ«AiÀÄ°è dgÀÄVzÁUÀ C°è ©.JA.²çà CªÀgÀÄ DUÀ«Ä¹zÀÝgÀÄ. ©.JA.²çà CªÀgÀ JzÀÄj£À°è ¨ÉlUÉÃj PÀȵÀÚ±ÀªÀÄðgÀÄ d£À¥ÀzÀ wç¥À¢UÀ¼À£ÀÄß zsÁn ®AiÀħzÀÞªÁV ºÁrzÀgÀÄ. C®èzÉ vÀªÀÄä ¨sÁªÀVÃvÉUÀ¼À£ÀÄß CzÉà zsÁn ®AiÀÄUÀ¼ÉÆA¢UÉ ºÁr eÁ£À¥ÀzÀ ¸ÉƧUÀ£ÀÄß ¸ÀÆa¹zÀgÀÄ. ©.JA.²çÃPÀAoÀAiÀÄå£ÀªÀgÀÄ Cwà ªÉÄaÑPÉÆAqÀgÀÄ.¥ÀzÉÃ¥ÀzÉà ¨ÉlUÉÃj CªÀgÀ£ÀÆß ºÉÆUÀ½zÀgÀÄ. ‘‘d£À¥ÀzÀ ¸Á»vÀåªÀ£ÀÄß §gÉzÀÄ d£ÀvÉUÉ vÉÆÃj¸À®Ä ¤ªÀÄUÉ®è £À£Àß PÉÆÃjPÉ EzÉ’’ JAzÀÄ £ÀÄrzÀgÀÄ.EµÀÖ®èzÉ dAiÀÄ PÀ£ÁðlPÀzÀ°è §gÀÄwÛzÀÝ eÁ£À¥ÀzÀ ¸ÀA§A¢s ¯ÉÃR£ÀUÀ¼ÀÄ ²çÃAiÀĪÀgÀ®Æè MAzÀÄ §UÉAiÀÄ DPÀµÀðPÀ £É¯ÉAiÀÄ£ÀÄß ¥ÀçwµÁצ¹vÀÄ. ªÀ¸ÁºÀvÀıÁ» EAVèµï ²PÀët PÀçªÀÄ gÁdQÃAiÀÄ ªÀÄvÀÄÛ zsÁ«ÄðPÀ PÁgÀtUÀ½UÁV CzÀgÀ CAwªÀÄ UÀÄjAiÀÄ §tÚ §AiÀįÁUÀÄwÛgÀĪÀ ºÉÆwÛUÉ ¸ÀA¸ÀÌøvÀzÉqÉUÉ ªÀÄvÉÛ ºÉÆgÀ¼ÀĪÀ ªÀÄvÀÄÛ CzÀgÀ §UÉAiÀÄ°è gÀZÀ£ÉV½¢gÀĪÀ ¸ÀAzÀ¨sÀðªÀÇ ªÀÄÆrgÀĪÀ ¸ÁzsÀåvÉ EzÉ. DzÀgÉ ªÀÄzsÀÄgÀZÉ£Àß, ªÀiÁ¹Û, ¨ÉÃAzÉç, D£ÀAzÀPÀAzÀ ªÉÆzÀ¯ÁzÀªÀgÀÄ D PÁ®PÉÌ GAlĪÀiÁrzÀ eÁ£À¥ÀzÀ eÁUÀÈw ²çà PÀĪÉA¥ÀÅ ªÉÆzÀ¯ÁzÀªÀgÀ°è GAlĪÀiÁrzÀ ZÉÃvÀ£À PÀ£ÀßqÀzÀ ¸ÀAzÀ¨sÀðzÀ°è ªÀÄgÉAiÀįÁUÀzÀAvÀºÀÄzÀÄ. »ÃUÉ ¥Àç¨sÀÄvÀézÀ C£ÀĨsÀªÀ, ªÀÄvÀÄÛ ¥ÀjPÀ®à£ÉAiÀÄ ZËPÀlÖ£ÀÄß «ÄÃj ²çÃAiÀĪÀgÀÄ eÁ£À¥ÀzÀªÀ£ÀÄß PÀAqÀ ºÉƸÀ §UÉAiÀÄ zÀȶÖPÉÆãÀ¢AzÀ £ÀªÉÇÃzÀAiÀÄ PÁªÀå ZÉÃvÀ£ÀPÉÌ ªÉÆzÀ¯ÁzÀ ¸ÀAzÀ¨sÀðªÀ£ÀÄß F £É¯ÉAiÀÄ°è »ÃUÉ «±Éèö¸À°PÉÌ ¸ÁzsÀåªÁVzÉ. ºÁUÁV PÀ£ÀßqÀ £ÀªÉÇÃzÀAiÀÄ PÁªÀå gÀÆ¥ÀÅUÉƼÀî®Ä «©s£Àß C£ÀĨsÁªÀ, ¨sÁµÉ ²®à ªÀÄvÀÄÛ ªÀÄ£ÉÆÃzsÀªÀÄðUÀ¼ÀÄ PÁgÀtªÁzÀªÀÅ J£ÀÄߪÀÅzÀQÌAvÀ PÀ£ÀßqÀ PÁªÀåPÉÌ ºÉƸÀ¢PÀÌ£ÀÄß vÉgÉzÀÄvÉÆÃjzÀ eÁ£À¥ÀzÀªÉà ªÀÄÆ® ¥ÉçÃgÀuÉAiÀiÁV ¤AvÀzÀÄÝ F §UÉAiÀÄ gÀZÀ£ÉUÀ¼ÀÄ ºÉZÀÄÑ d£À¥ÀgÀªÁzÀÄzÀ£ÀÄß C®èUÀ¼ÉAiÀÄĪÀAw®è.
                                         - qÁ.¥ÀæPÁ±À UÀ.SÁqÉ

«¼Á¸À : 
qÁ.¥ÀæPÁ±À UÀ.SÁqÉ, ‘²æÃUÀÄgÀÄ’, ¸ÀgÀ¸Àéw §qÁªÀuÉ, ¸ÀASÉå63.£ÀªÀ£ÀUÀgÀ,¨ÁUÀ®PÉÆÃl,
ªÉÆ. 9845500890